Advertisement
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಬಹಳ ಹಾನಿ ಉಂಟಾಗಿದೆ. ಜೂನ್ 1ರಿಂದ ಸೆಪ್ಟಂಬರ್ 1ರ ವರೆಗೆ ಜಿಲ್ಲೆಯಾದ್ಯಂತ 759.22 ಕೋಟಿ ರೂ. ನಷ್ಟವಾ ಗಿದ್ದು, ಮಳೆ ಹಾನಿಗೊಳಗಾದ ಕೆರೆಗಳನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
Related Articles
Advertisement
ಮೂಲ ಸೌಕರ್ಯಗಳ ಹಾನಿಗಳಲ್ಲಿ ಹಳ್ಳಿ ಪ್ರದೇಶ ದಲ್ಲಿ 255.30 ಕಿ.ಮೀ ರಸ್ತೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 260 ಶಾಲೆಗಳು, 1 ಅಂಗನವಾಡಿಗಳು, 28 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1129 ವಿದ್ಯುತ್ ಕಂಬಗಳು ಹಾಗೂ 35 ಟಿಸಿ ಹಾನಿಯಾಗಿದೆ ಎಂದು ಹೇಳಿದರು. ಅನುದಾನಕ್ಕೆ ಅನುಮೋದನೆ: ಶಾಲೆಗಳ ದುರಸ್ತಿಗೆ 466 ಲಕ್ಷ ರೂ., ಅಂಗನವಾಡಿ ಕೇಂದ್ರಕ್ಕೆ 2 ಲಕ್ಷ ರೂ., ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 56 ಲಕ್ಷ ರೂ., ಲೋಕೋಪಯೋಗಿ ಇಲಾಖೆ ದುರಸ್ತಿ ಕಾಮಗಾರಿ ಗಳಿಗೆ 104 ಲಕ್ಷ ರೂ., ಪ್ರವಾಹ, ಮಳೆ ಹಾನಿಯಾಗಿರುವುದನ್ನು ಸರಿ ಪಡಿಸಲು ಇಲಾಖಾವಾರು ಅನುದಾನ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದರು.
ಜಿಪಂ ಸಿಇಒ ಶಾಂತ ಎಲ್. ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪ ವಿಭಾಗಾಧಿಕಾರಿ ಆರ್.ಐಶ್ವರ್ಯ ಸೇರಿದಂತೆ ಮತ್ತಿತರರಿದ್ದರು. ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಬಹಳ ಹಾನಿ ಉಂಟಾಗಿದೆ. ಜೂನ್ 1ರಿಂದ ಸೆಪ್ಟಂಬರ್ 1ರವರೆಗೆ ಜಿಲ್ಲೆಯಾದ್ಯಂತ 759.22 ಕೋಟಿ ರೂ. ನಷ್ಟವಾಗಿದ್ದು, ಮಳೆ ಹಾನಿಗೊಳಗಾದ ಕೆರೆಗಳನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮ ವಹಿಸಲಾಗುವುದು.– ಜಯರಾಂ ರಾಯಪುರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ