Advertisement

ದೇಶ ಈಗ ಸಂಪೂರ್ಣ ಆತ್ಮವಿಶ್ವಾಸ ತಳೆದಿದೆ: ಪ್ರಧಾನಿ

09:56 AM Aug 15, 2018 | Team Udayavani |

ಹೊಸದಿಲ್ಲಿ: ದೇಶಾದ್ಯಂತ 72 ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ 5 ನೇ ಬಾರಿ ಧ್ವಜಾರೋಹಣ ನರೆವೇರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.

Advertisement

ಭಾಷಣದ ಆರಂಭಕ್ಕೆ ತಮಿಳು ಕವಿ ಸುಬ್ರಹ್ಮಣ್ಯ ಭಾರತೀಯಾರ್‌ ಅವರ ಕವಿತೆಯ ಸಾಲುಗಳನ್ನು ತಮಿಳಿನಲ್ಲೇ ವಾಚಿಸಿದರು. ಭಾರತ ಭವ್ಯ ರಾಷ್ಟ್ರವಾಗಿ ಉದಯಿಸಿ ಇತರರಿಗೆ ಸ್ಫೂರ್ತಿಯಾಗಲಿದೆ. ಸಂಕೋಲೆಗಳನ್ನು ಕಳಚಿಕೊಂಡು ವಿಶಕ್ಕೆ ತೋರಿಸಿ ಕೊಡಲಿದೆ ಎಂದಿದ್ದಾರೆ. ಆ ದೆಸೆಯಲ್ಲಿ  ನಾವು ಮುನ್ನಡೆಯಬೇಕು ಎಂದರು. 

ದೇಶವಾಸಿಗಳು  ಆತ್ಮ ವಿಶ್ವಾಸವನ್ನು ತಳೆದಿದ್ದು, ಹೊಸ ಕನಸುಗಳು ಮತ್ತು ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದರು. 

ನಮ್ಮ ದೇಶದ ತಾಯಂದಿರಿಗೆ ನಮ್ಮ ನಮನಗಳು.ನಮ್ಮ ನೌಕಾಪಡೆಯ 6 ಹೆಣ್ಣು ಮಕ್ಕಳು ಸಪ್ತ ಸಾಗರಗಳನ್ನು ದಾಟಿ ಬಂದಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು. 

2022 ರ ವೇಳೆಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತದ ನೌಕೆಯನ್ನು ಕಳುಹಿಸಿ ಅಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ಗುರಿ ನಮ್ಮದಾಗಿದೆ ಎಂದರು. 

Advertisement

ಒನ್‌ರ್‍ಯಾಂಕ್‌ ಒನ್‌ ಪೆನ್ಷನ್‌,ಸ್ವಚ್ಛ ಭಾರತದಂತಹ ಯೋಜನೆಗಳನ್ನು ಜಾರಿ ಮಾಡಿ ನಮ್ಮ ಬದ್ಧತೆಯನ್ನು ತೋರಿದ್ದೇವೆ ಎಂದರು. 

ಈ ವರ್ಷ ಸಂಪ್ಟೆಂಬರ್‌ ತಿಂಗಳಿನಲ್ಲಿ ಪ್ರಧಾನ್‌ ಮಂತ್ರಿ ಜನ್‌ ಆರೋಗ್ಯ ಯೋಜನೆಯನ್ನು ಜಾರಿ ಮಾಡುತ್ತೇವೆ. ಇದು ಬಡವರಿಗೆ 5 ಲಕ್ಷ ರೂಪಾಯಿ ವರೆಗೆ ಚಿಕಿತ್ಸೆಗೆ ಹಣಕಾಸು ನೆರವು ನೀಡಲಿದೆ ಎಂದರು. 

ಇಂದಿನ ಭಾರತದಲ್ಲಿ, ಸ್ವಜನಪಕ್ಷಪಾತಕ್ಕೆ ಅವಕಾಶವಿಲ್ಲ. ಎಲ್ಲಾ ಕೆಲಸಗಳನ್ನು ಪಾರದರ್ಶಕವಾಗಿ ಮಾಡಲಾಗುತ್ತಿದೆ ಎನ್ನುವುದನ್ನು  ನಾವು ಖಚಿತಪಡಿಸಿದ್ದೇವೆ ಎಂದರು. 

ತ್ರಿವಳಿ ತಲಾಖ್‌ನಿಂದಾಗಿ ಮುಸ್ಲಿಂ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಆ ಪದ್ದತಿಗೆ  ಅಂತ್ಯ ಹಾಕಲು ಬದ್ಧರಾಗಿದ್ದೆವು. ಹಲವರು ನಮ್ಮನ್ನು ಈ ವಿಚಾರದಲ್ಲಿ ವಿರೋಧಿಸಿದ್ದರು ಎಂದರು. 

ಕಾಶ್ಮೀರದಲ್ಲಿ ಬಂದೂಕಿನಿಂದ ಎಲ್ಲದಕ್ಕೂ ಪರಿಹಾರ ಸಾಧ್ಯವಿಲ್ಲ. ಅಟಲ್‌ ಜಿ ಅವರ ಆಶಯದಂತೆ ಶಾಂತಿ ನೆಲೆಸಲು ಮುಂದಾಗಿದ್ದೇವೆ.ಬಂಡುಕೋರರಿಂತ ತತ್ತರಿಸಿದ್ದ ತ್ರಿಪುರಾ, ಅರುಣಾಚಲದಲ್ಲಿ ಈಗ ಶಾಂತಿ ನೆಲೆಸಿದೆ. ಈಶಾನ್ಯ ರಾಜ್ಯಗಳು ದೆಹಲಿಗೆ ಹತ್ತಿರವಾಗಿವೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next