Advertisement

ನಾಲ್ಕು ಮಕ್ಕಳು ನೀರು ಪಾಲು

06:15 AM Nov 22, 2018 | |

ಬೆಳಗಾವಿ: ಈದ್‌ ಮಿಲಾದ್‌ ಹಬ್ಬದ ರಜೆ ಹಿನ್ನೆಲೆಯಲ್ಲಿ ಸಾವಗಾಂವ ಕೆರೆಯಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳು ನೀರು ಪಾಲಾದ ಹೃದಯವಿದ್ರಾವಕ ಘಟನೆ ಬುಧವಾರ ಸಂಭವಿಸಿದೆ. 

Advertisement

ಭಾಗ್ಯ ನಗರದ ಚೈತನ್ಯ ಬಾಂಧುರ್ಗೆ(16), ಬೆನಕನಹಳ್ಳಿಯ ಸಾಹೀಲ್‌ ಯುವರಾಜ ಬೆನಕೆ(16), ಶಹಾಪುರದ ಗೌತಮ ಕಲಘಟಗಿ(15), ಗಣೇಶಪುರದ ಅಮನಸಿಂಗ್‌ ಸಿಂಗ್‌(14) ಮೃತ ವಿದ್ಯಾರ್ಥಿಗಳು. ಗಣೇಶಪುರದ ಲಕ್ಷ್ಮೀ ಟೆಕ್‌ಡಿಯ ಗುಡ್‌ ಶೆಫರ್ಡ್‌ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಈ ನಾಲ್ವರು ವಿದ್ಯಾರ್ಥಿಗಳು ಎರಡು ದ್ವಿಚಕ್ರ ವಾಹನಗಳ ಮೇಲೆ ಸಾವಗಾಂವ ಕೆರೆಗೆ ಹೋಗಿದ್ದರು. ಸಾವಗಾಂವ ಹಾಗೂ ಬೆನಕನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಈ ಕೆರೆಗೆ ಇಳಿದಾಗ ಈಜು ಬಾರದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next