Advertisement

ಲೋಕಾ ಅದಾಲತ್‌: ಒಂದೇ ದಿನ 64 ಲಕ್ಷ ಕೇಸ್‌ ಇತ್ಯರ್ಥ

12:17 PM Feb 14, 2023 | Team Udayavani |

ಬೆಂಗಳೂರು: ರಾಜ್ಯವ್ಯಾಪಿ ಫೆ.11 ರಂದು ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 64.13 ಲಕ್ಷ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು ಲೋಕ ಅದಾಲತ್‌ ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್‌ ನ್ಯಾಯಮೂರ್ತಿ ಬಿ. ವೀರಪ್ಪ , ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಪ್ರಕರಣಗಳು ಹಾಗೂ ಪರಿಹಾರದ ಅಂಕಿ-ಅಂಶಗಳು ಸೇರಿದಂತೆ ಇನ್ನಿತರ ವಿಶೇಷತೆಗಳನ್ನು ಹಂಚಿಕೊಂಡರು. ನ್ಯಾಯಾಲಯಗಳಲ್ಲಿ ಬಾಕಿ ಇದ್ದ 1,87,171 ಪ್ರಕರಣಗಳು ಹಾಗೂ 62,26,437 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ 64,13,608 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಜತೆಗೆ, 1,404 ಕೋಟಿ ರೂ. ಪರಿಹಾರ ಕೊಡಿಸಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 232 ಕೋಟಿ ರೂ. ಗಳನ್ನು ಜಮೆ ಮಾಡಿಸಲಾಗಿದೆ ಎಂದು ತಿಳಿಸಿದರು.

4.14 ಲಕ್ಷ ಕಂದಾಯ ಪ್ರಕರಣಗಳು ವಿಲೇವಾರಿ ಮಾಡಲಾಗಿದೆ, 14,723 ಬ್ಯಾಂಕ್‌ ವಸೂಲಾತಿ ವ್ಯಾಜ್ಯ ಪೂರ್ವ ಮತ್ತು ಬಾಕಿ ಇರುವ ಪ್ರಕರಣಗಳಲ್ಲಿ 157 ಕೋಟಿ ರೂ ಮೊತ್ತ ವಸೂಲಿ ಮಾಡಿ ಇತ್ಯರ್ಥ ಮಾಡಲಾಗಿದೆ, 670 ವೈವಾಹಿಕ ಪ್ರಕರಣಗಳಲ್ಲಲಿ 222ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ದಂಪತಿಯ ರಾಜಿ ಸಂಧಾನ ನಡೆಸಲಾಗಿದೆ. 2,724 ವಿಭಾಗ ದಾವೆಗಳು, ಮೋಟಾರು ವಾಹನ ಅಪರಾಧದ 4,050 ಪ್ರಕರಣ ಇತ್ಯರ್ಥ ಪಡಿಸಿ 179 ಕೋಟಿ ರೂ ಪರಿಹಾರ ಮೊತ್ತದ ವಿಲೇವಾರಿ, 10,766 ಚೆಕ್‌ ಬೌನ್ಸ್‌ ಪ್ರಕರಣಗಳ ವಿಲೇವಾರಿ, 4,723 ಎಲ್‌ಎಸಿ ಮತ್ತಿತ್ತರ ಎಕ್ಸುಕ್ಯುಷನ್‌ ಪ್ರಕರಣಗಳಲ್ಲಿ 221 ಕೋಟಿ ರೂ ಗಳನ್ನು ಇತ್ಯರ್ಥದ ಮೊತ್ತವಾಗಿ ನೀಡಲಾಗಿದೆ. 3,076 ಸಿವಿಲ್‌ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದರು.

ಒಂದೇ ಕೇಸ್‌ನಲ್ಲಿ 1.25 ಕೋಟಿ ಪರಿಹಾರ: ಮೋಟಾರು ಅಪಘಾತ ಪರಿಹಾರಕ್ಕೆ ಸಂಬಂಧಿಸಿದ ಒಟ್ಟು 4,050 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 179 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಹಾಸನದ ಹಿರಿಯ ಸಿವಿಲ್‌ ನ್ಯಾಯಾಧೀಶರ ಕೋರ್ಟ್ ನಲ್ಲಿದ್ದ ಪ್ರಕರಣವೊಂದರಲ್ಲಿ 1.25 ಕೋಟಿ ರೂ. ಪರಿಹಾರವನ್ನು ವಿಮಾ ಸಂಸ್ಥೆಯ ಮೂಲಕ ಕೊಡಿಸಲಾಗಿದೆ ಎಂದರು. ‌

Advertisement

Udayavani is now on Telegram. Click here to join our channel and stay updated with the latest news.

Next