Advertisement

Kushtagi: ಹ್ಯಾಂಡಲ್ ಆಸರೆ ಇಲ್ಲದೇ, ಎರಡು ಕೈ ಬಿಟ್ಟು ಸೈಕಲ್ ಚಲಾಯಿಸುವ 61 ವರ್ಷದ ರೈತ

02:52 PM Aug 15, 2023 | Team Udayavani |

ಕುಷ್ಟಗಿ: 61 ವರ್ಷದ ರೈತರೊಬ್ಬರು ಈ ಬಾರಿಯ 77ನೇ ಸ್ವಾತಂತ್ರ್ಯ ದಿನದಂದು ರಾಷ್ಟ್ರ ಧ್ವಜಾ ಹಿಡಿದು ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸವಾರಿ ಸಹಾಸ ಮಾಡಿ ಗಮನ ಸೆಳೆದರು.

Advertisement

61 ವರ್ಷದ ಯಾಖೂಬ್ ಖಾನ್ ರಸೂಲ್ ಖಾನ್ ಸೌಧಾಗರ್ ಎಂಬವರು ಸೈಕಲ್ ಸಹಾಸಿ. ಹ್ಯಾಂಡಲ್ ಆಸರೆ ಇಲ್ಲದೇ ಎರಡು ಕೈ ಬಿಟ್ಟು ಸೈಕಲ್ ಚಲಾಯಿಸುವುದಲ್ಲದೇ ಸೈಕಲ್ ಪೆಡಲ್ ತುಳಿಯುತ್ತಲೇ ಕೂಡ ಸುಮಾರು ಹೊತ್ತು ದೂರ ಕ್ರಮಿಸುವ ಸಹಾಸಿಗ. ಇವರು ಆಗಾಗ್ಗೆ ಸೈಕಲ್ ಸಹಾಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ಬಾರಿ 77ನೇ ಸ್ವಾತಂತ್ರ್ಯ ಮಹೋತ್ಸವದಂದು ಕುಷ್ಟಗಿ ಪಟ್ಟಣದ ಕಾರ್ಗಿಲ್ ವೃತ್ತದಿಂದ ಮಾರುತಿ ವೃತ್ತ, ಕನಕದಾಸ ವೃತ್ತ ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತದವರೆಗೂ ರಾಷ್ಟ್ರ ಧ್ವಜ ಹಿಡಿದು ಸೈಕಲ್ ಸವಾರಿ ಮಾಡಿ ಗಮನ ಸೆಳೆದು ಸಾರ್ವಜನಿಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದರು. ರೈತ ಯಾಖೂಬ್ ಖಾನ್ ಸಹಾಸಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next