Advertisement

Mangaluru; 60 ಲಕ್ಷ ರೂ. ಮೌಲ್ಯದ ಸೊತ್ತುಗಳ ಕಳವು: ಮ್ಯಾನೇಜರ್‌ ವಿರುದ್ದ ದೂರು

09:19 PM Aug 19, 2023 | Team Udayavani |

ಮಂಗಳೂರು: ನಗರದ ಎಂ.ಜಿ. ರಸ್ತೆಯ ಕಟ್ಟಡ ಕಾಮಗಾರಿ ಸ್ಥಳದಿಂದ ಸುಮಾರು 60 ಲಕ್ಷ ರೂ. ಮೌಲ್ಯದ ಸೊತ್ತುಗಳು ಕಳವಾದ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಎಂಪಾರ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ಶೇಖರ್‌ ಎಂಬಾತ ಸುಮಾರು 19 ವರ್ಷಗಳಿಂದ ಕೆಲಸ ನಿರ್ವಹಿಸಿಕೊಂಡಿದ್ದ. ಕಂಪೆನಿಯ ವತಿಯಿಂದ ನಿರ್ಮಾಣ ಮಾಡುತ್ತಿರುವ ಎಂ.ಜಿ. ರಸ್ತೆಯಲ್ಲಿರುವ ಜನತಾ ಕನ್‌ಸ್ಟ್ರಕ್ಷನ್ಸ್‌ರವರ ಮಾಲಕತ್ವದ ಕಾಮಗಾರಿಯ ಪ್ರೊಜೆಕ್ಟ್ ಜನರಲ್ ಮ್ಯಾನೇಜರ್‌ ಹಾಗೂ ಸೈಟ್‌ ಇನ್‌ಚಾರ್ಜ್‌ ಆಗಿದ್ದ. ಅನಂತರ ಕಾಮಗಾರಿ ಕಾರಣಾಂತರಗಳಿಂದ ಅರ್ಧಕ್ಕೆ ನಿಂತು ಹೋದ ಮೇಲೆ ಕಂಪೆನಿಗೆ ಸಂಬಂಧಿಸಿದ ಕಟ್ಟಡ ನಿರ್ಮಾಣ ಸಾಮಾಗ್ರಿಗಳು ಅದೇ ಸೈಟ್‌ನಲ್ಲಿ ಇದ್ದವು.

ಶೇಖರ್‌ 2023ನೇ ಜನವರಿಯಲ್ಲಿ ಕಂಪೆನಿಯ ಗಮನಕ್ಕೆ ಬಾರದ ಹಾಗೆ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸುಮಾರು 60 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿ ಕಂಪೆನಿಗೆ ನಷ್ಟ ಮಾಡಿದ್ದಾನೆ ಎಂದು ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next