Advertisement

ಕಾಳಧನಿಕರಿಂದ ಬಿಜೆಪಿ ಚುನಾವಣೆಗೆ 6 ಸಾವಿರ ಕೋ.ರೂ.: ಖರ್ಗೆ

12:27 AM Feb 18, 2024 | Team Udayavani |

ಮಂಗಳೂರು: ಒಂದೆಡೆ ಕಾಂಗ್ರೆಸ್‌ನ ಖಾತೆಯನ್ನೇ ಕೇಂದ್ರ ಸರಕಾರ ಜಪ್ತಿ ಮಾಡುತ್ತಿದ್ದರೆ, ಇನ್ನೊಂದೆಡೆ ಚುನಾವಣ ಬಾಂಡ್‌ಗಳ ಮುಖೇನ 6000 ಕೋಟಿ ರೂ. ಮೊತ್ತವನ್ನು ಕಾಳಧನಿಕರಿಂದ ಪಡೆದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಾಪ್ರಹಾರ ನಡೆಸಿದರು.

Advertisement

ಬ್ಲಾಕ್‌ ಮನಿ ಹೋಲ್ಡ್ ಗಳಿಂದ ಕೋಟ್ಯಂತರ ರೂಪಾಯಿ ಪಡೆದು ಕೊಂಡಿದ್ದೀರಿ; ಅವರಿಗೆ ಏನೇನು ಲಾಭ ಮಾಡಿದ್ದೀರೋ ಗೊತ್ತಿಲ್ಲ ಎಂದರು.

ಕಾಂಗ್ರೆಸ್‌ನ್ನು ಪೂರ್ತಿ ನಿರ್ನಾಮ ಮಾಡಲು ಬಿಜೆಪಿಯವರು ಹೊರಟಿದ್ದಾರೆ. ಕಾಂಗ್ರೆಸ್‌ನಲ್ಲಿ ದುಡ್ಡೇ ಇರ ಬಾರದೆಂದು ನಮ್ಮ ಪಕ್ಷದ ಎಲ್ಲ ಖಾತೆ ಜಪ್ತಿ¤ ಮಾಡಿದರು, ಇದಕ್ಕೆ ನಮ್ಮ ವರು ರೊಚ್ಚಿಗೆದ್ದ ಬಳಿಕ ಅದನ್ನು ಸರಿಪಡಿ ಸಿದರು. ವಿಪಕ್ಷದ ಬಳಿ ದುಡ್ಡೇ ಇರಬಾರದು, ಜನರು ಕೊಟ್ಟ ದುಡ್ಡು, ಸದಸ್ಯತ್ವದ ದುಡ್ಡು ಎಲ್ಲವನ್ನೂ ಸೀಜ್‌ ಮಾಡಿದ್ದರು ಎಂದರು.

ನರೇಂದ್ರ ಮೋದಿ ಇನ್ನು
ಚುನಾವಣೆ ನಡೆಸುವುದಿಲ್ಲ
ನರೇಂದ್ರ ಮೋದಿ ಸರ್ವಾಧಿಕಾರಿ ಆಗಲು ಹೊರಟಿದ್ದಾರೆ. ಹಾಗಾಗಿ ಇನ್ನು ಚುನಾವಣೆ ಕೂಡ ನಡೆಸುವುದಿಲ್ಲ. ಮಾಧ್ಯಮ, ನ್ಯಾಯಾಂಗ, ಇಡಿ, ಐಟಿ ಸೇರಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನೂ ನಿಯಂತ್ರಣಕ್ಕೆ ಪಡೆಯುತ್ತಿದ್ದಾರೆ ಎಂದು ಟೀಕಿಸಿದರು.

ಬಿಜೆಪಿಯವರು ಶ್ರೀಮಂತರ ಪರ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಅವರು ಬಡವರು, ದಲಿತರನ್ನು ತುಳಿಯುವ ಗುರಿ ಇಟ್ಟು ಕೊಂಡಿದ್ದಾರೆ. ಅಂಥವರ ಪಕ್ಷಕ್ಕೆ ಹೋಗ್ತಿàರಾ ಎಂದು ಕೇಳಿದ ಅವರು, ಕಾಂಗ್ರೆಸ್‌ ಇದ್ದ ಕಾರಣ ಸಂವಿಧಾನ ಬಂದ ಮೇಲೆ ಮಹಿಳೆಯರಿಗೆ ಓಟಿನ ಅಧಿಕಾರ ಸಿಕ್ಕಿದೆ. ಬಿಜೆಪಿಯವರ ತತ್ವದ ಪ್ರಕಾರ ಆಗಿದ್ದರೆ ಎಲ್ಲೆಡೆ ಮನುಸ್ಮೃತಿ ಜಾರಿಯಾಗುತ್ತಿತ್ತು. ಹೆಣ್ಮಕ್ಕಳಿಗೆ ಯಾವುದೇ ಸ್ಥಾನಮಾನ ಸಿಗುತ್ತಿರಲಿಲ್ಲ ಎಂದರು.

Advertisement

ನಾವು ಗ್ಯಾರಂಟಿ ಮಾಡಿದ ಮೇಲೆ ಮೋದಿ ಎಚ್ಚರಾಗಿದ್ದಾರೆ. ನಾನ್ಯಾಕೆ ಕೊಡಬಾರದು ಅಂತ ಶುರು ಮಾಡಿದ್ದಾರೆ. ಈಗಾಗಲೇ ಅವರು ನೀಡಿದ 15 ಲಕ್ಷ, ರೈತರ ಹಣ ಡಬಲ್‌, ಪ್ರತೀ ವರ್ಷ 2 ಕೋಟಿ ಉದ್ಯೋಗ ಭರವಸೆಗಳು ಎಲ್ಲಿ ಹೋದವು? ಅವರ ಹಳೆ ಗ್ಯಾರಂಟಿಗಳೆಲ್ಲ ಫೇಲ್‌ ಆದ ಮೇಲೆ ಈಗ ಮತ್ತೆ ಗ್ಯಾರಂಟಿ ಎನ್ನುತ್ತಿದ್ದಾರೆ. ನಾವೇನು ಸಿದ್ದರಾಮಯ್ಯ ಗ್ಯಾರಂಟಿ ಎನ್ನುತ್ತಿಲ್ಲ, ಕಾಂಗ್ರೆಸ್‌ ಗ್ಯಾರಂಟಿ ಎನ್ನುತ್ತೇವೆ. ಅವರು ಮೋದಿ ಗ್ಯಾರಂಟಿ ಅಂತಾರೆ ಎಂದು ಖರ್ಗೆ ಟೀಕಿಸಿದರು.

ಮೋದಿ ತೊಡೆ ಮೇಲೆ ಗೌಡರು
ಸೆಕ್ಯುಲರ್‌ ಎಂಬ ಹೆಸರು ಇಟ್ಟುಕೊಂಡ ಪಕ್ಷದ ನಾಯಕ ಎಚ್‌.ಡಿ. ದೇವೇಗೌಡರು ಈಗ ಮೋದಿ ತೊಡೆ ಮೇಲೆ ಕೂತಿದ್ದಾರೆ. ಒಂದೊಮ್ಮೆ ದೂರುತ್ತಿದ್ದವರು ಈಗ ಮುದ್ದಾಡುತ್ತಿದ್ದಾರೆ. ಅವರು ಏನೇ ಮಾಡಲಿ ನಮ್ಮ ಗ್ಯಾರಂಟಿ ಯೋಜನೆಗಳು, ಬಜೆಟನ್ನು ನೋಡಿದ ಮೇಲೆ ರಾಜ್ಯದಲ್ಲಿ ಕನಿಷ್ಠ 20 ಸೀಟ್‌ಗಳನ್ನಾದರೂ ಗೆದ್ದೇ ಗೆಲ್ಲಲಿದ್ದೇವೆ ಎಂಬ ವಿಶ್ವಾಸ ಹುಟ್ಟಿದೆ ಎಂದರು.

ಕರಾವಳಿಯವರೇಕೆ ಹೀಗೆ?
ಒಂದೊಮ್ಮೆ ಕರಾವಳಿಯಲ್ಲಿ ಕಾಂಗ್ರೆಸ್‌ ಜಾರಿಗೆ ತಂದ ಭೂಸು ಧಾರಣ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆಯಂತಹ ಯೋಜನೆಗಳ ಭರಪೂರ ಲಾಭವನ್ನು ಪಡೆದ ಮಂದಿ ಯೇ ಈಗ ಕಾಂಗ್ರೆಸ್‌ನಿಂದ ದೂರ ಸರಿದು ಕೃತಘ್ನರಾಗಿದ್ದಾರೆ. ಇದು ಸರಿ ಯಲ್ಲ ಎಂದರು ಖರ್ಗೆ.

ಎಲ್ಲವೂ ಕಾಂಗ್ರೆಸ್‌ನದು; ಜೈಕಾರ ಮಾತ್ರ ಮೋದಿಗೆ!
ಕರಾವಳಿಯಲ್ಲಿ ನೀವು ಓಡಾಡುವ ರಸ್ತೆ, ಸೇತುವೆ, ಮಂಗಳೂರು ವಿಮಾನ ನಿಲ್ದಾಣ, ಬಂದರು ನಿರ್ಮಿಸಿದ್ದು ಕಾಂಗ್ರೆಸ್‌, ನಮ್ಮಿಂದ ಫಲ ಪಡೆದು ನಮ್ಮನ್ನೇ ಮರೆತರೆ ಯಾವ ನ್ಯಾಯ ಎಂದ ಅವರು ಕಾಂಗ್ರೆಸ್‌ ಸರಕಾರ ಈಗ ನೀಡುತ್ತಿರುವ ಗ್ಯಾರಂಟಿಯನ್ನಾದರೂ ನೆನಪಿಟ್ಟುಕೊಳ್ಳಿ. ನಾವು ಎಲ್ಲ ಗ್ಯಾರಂಟಿಗಳಿಗೆ ಬಜೆಟ್‌ನಲ್ಲೇ ಹಣ ಇಟ್ಟಿದ್ದೇವೆ. ಏನೂ ನೀಡದ ಮನುಷ್ಯನಿಗೆ ಏಕೆ ಜೈಕಾರ ಹಾಕುತ್ತೀರಿ. ಅನ್ನ ನಮ್ಮದು, ಶಿಕ್ಷಣ ನಮ್ಮದು, ಜೈಕಾರ ಮಾತ್ರ ಮೋದಿಗೆ ಏಕೆ ಎಂದರು.

ಕಾಂಗ್ರೆಸ್‌ ಮಾದರಿ V/S ಮೋದಿ ಫೇಕ್‌ ಮಾದರಿ
ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ, ರಾಜ್ಯ ಸರಕಾರ ತನ್ನ ಗ್ಯಾರಂಟಿಗಳಿಂದಾಗಿ ಜನರಿಗೆ ನೆಮ್ಮದಿ ತಂದುಕೊಟ್ಟಿದೆ. ಒಂದೆಡೆ ಕಾಂಗ್ರೆಸ್‌ನ ಈ ಮಾದರಿಯಾದರೆ ಇನ್ನೊಂದೆಡೆ ಮೋದಿಯ ಸುಳ್ಳುಗಳ ಫೇಕ್‌ ಮಾದರಿ ಇದೆ. 2 ಕೋಟಿ ಉದ್ಯೋಗ ಭರವಸೆ, 100 ಸ್ಮಾರ್ಟ್‌ಸಿಟಿಗಳ ಭರವಸೆ ಏನಾಯಿತು ಎನ್ನುವುದನ್ನು ಬಿಜೆಪಿಯವರು ಹೇಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next