Advertisement

ಹಿಮಪಾತಕ್ಕೆ ಆರು ಯೋಧರ ಬಲಿ

12:30 AM Feb 21, 2019 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದ ಕಿನೌ°ರ್‌ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಸಂಭವಿಸಿದ ಹಿಮಪಾತದಲ್ಲಿ ಜಮ್ಮು ಕಾಶ್ಮೀರ ರೈಫ‌ಲ್ಸ್‌ ಪಡೆಗೆ ಸೇರಿದ ಆರು ಯೋಧರು ಮೃತಪಟ್ಟಿದ್ದಾರೆನ್ನಲಾಗಿದೆ. ಬುಧವಾರ ಐದು ಮೃತದೇಹಗಳನ್ನು ಹೊರತಗೆಯಲಾಗಿದೆ. ಇನ್ನುಳಿದ ಯೋಧರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜೆಕೆ ರೈಫ‌ಲ್ಸ್‌ ಯೋಧರ ಜತೆಗೆ ಅದೇ ಜಾಗದಲ್ಲಿದ್ದ ಇಂಡೋ-ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ) ಯೋಧರೂ ಹಿಮಪಾತದಲ್ಲಿ ಹುದುಗಿಹೋಗಿದ್ದು ಅವರಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ. ಪುಲ್ವಾಮಾ ಘಟನೆಯ ನಂತರ ವಿವಿಧ ಕಾರಣಗಳಿಂದಾಗಿ ಭಾರತೀಯ ಸೇನೆಗೆ ಆಘಾತಗಳ ಮೇಲೆ ಆಘಾತ ಕಾಡುತ್ತಿದ್ದು, ಒಂದಿಲ್ಲೊಂದು ಕಾರಣಗಳಿಗಾಗಿ ಯೋಧರು ಸಾವನ್ನಪ್ಪುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next