Advertisement

ಶಾಲೆಯಿಂದ ಹೊರಗುಳಿದ 597ಮಕ್ಕಳು

05:41 PM Sep 13, 2021 | Team Udayavani |

ದೇವನಹಳ್ಳಿ: ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲೆಗಳು ಇದೀಗ ಜಿಲ್ಲೆಯಾದ್ಯಂತ ಪ್ರಾರಂಭವಾಗಿದೆ. ಉತ್ಸಾಹದಿಂದ ಮಕ್ಕಳು ಶಾಲೆಯತ್ತ ಮುಖ ಮಾಡುತ್ತಿದ್ದಾರೆ. ಆದರೂ ಜಿಲ್ಲೆಯಲ್ಲಿ 597 ಮಕ್ಕಳು ಶಿಕ್ಷಣ ಮೊಟಕು ಗೊಳಿಸಿದ್ದಾರೆ ಎಂಬ ಬೆಳಕಿಗೆ ಬಂದಿದೆ.

Advertisement

ಆರರಿಂದ ಹದಿನಾರು ವರ್ಷದ ಮಕ್ಕಳು ಸರಾಸರಿ ವರದಿಯಂತೆ ಎಸ್ಸೆಸ್ಸೆಲ್ಸಿ ಬಳಿಕ ಶಿಕ್ಷಣ ಮೊಟಕುಗೊಳಿಸಿದವರ ಸಂಖ್ಯೆ ಹೆಚ್ಚಿದೆ. ಎಸ್ಸೆಸ್ಸೆಲ್ಸಿ ತೇರ್ಗಡೆ ಯಾದರೂ ಮುಂದಿನ ಶಿಕ್ಷಣಕ್ಕೆ ಹೋಗಲು ಬಯಸದ ಕೆಲವು ವಿದ್ಯಾರ್ಥಿಗಳಿದ್ದಾರೆ. ಮತ್ತೆ ಕೆಲವು ವರದಿಯಂತೆ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಲಿ ಯಾಗಿದ್ದಾರೆ. ಬಡತನ ಅನಾರೋಗ್ಯ ಮತ್ತಿತರ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಸೇರಿದಂತೆ ಅನೇಕ ಕಾರಣಗಳಿಂದ ಮಕ್ಕಳು ಕಾಲೇಜು ವಿದ್ಯಾಭ್ಯಾಸದಿಂದ ದೂರವಾಗುತ್ತಿದ್ದಾರೆ ಎನ್ನಲಾಗುತ್ತಿದೆ.

ಪೋಷಕರ ಮನವೊಲಿಕೆ: ಜಿಲ್ಲೆಯಲ್ಲಿ 395 ಮಕ್ಕಳು ಶಾಲೆಗೆ ದಾಖಲಾಗಿದ್ದರೂ ಹಾಜರಾಗುತ್ತಿಲ್ಲ. ಕೆಲವರು ವರ್ಗಾವಣೆ ಪತ್ರ ಪಡೆಯುತ್ತಿದ್ದಾರೆ. ಮತ್ತೆ 192 ಮಕ್ಕಳು ಶಾಲೆಗೆ ದಾಖಲಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ ಶಿಕ್ಷಣ ಇಲಾಖೆಯ ಪ್ರವೇಶ ದಾಖಲೆಯಲ್ಲಿ ಈ ಅಂಶ ತಿಳಿದುಬಂದಿದ್ದು,

ಪ್ರಸ್ತುತ 30 ಮಕ್ಕಳನ್ನು ಪತ್ತೆ ಮಾಡಿ ಶಾಲೆಯಿಂದ ಹೊರಗುಳಿಯಲು ಕಾರಣವೇನೆಂಬ ‌ಪರಿಶೀಲನೆ ಮಾಡಿದೆ. ಶಿಕ್ಷಣ ಇಲಾ ಖೆ ಪೋಷಕರನ್ನು ಮನವೊಲಿಸಿ ಮತ್ತೆ ಮಕ್ಕಳ ನ್ನು ಶಾಲೆಯತ್ತ ಕರೆತರುವ ಪ್ರಯತ್ನ ‌ನಡೆಯುತ್ತಿದೆ.

ಶಾಶ್ವತವಾಗಿ ಶಿಕ್ಷಣಕ್ಕೆ ತಿಲಾಂಜಲಿ?: ಕೊರೊನಾ ಕಾರಣದಿಂದ ಸುಮಾರು 18 ತಿಂಗಳುಗಳ ಕಾಲ ಶಾಲಾ ಕಾಲೇಜುಗಳು ಮುಚ್ಚಿದ್ದವು. ಈ ಹಿನ್ನೆಲೆಯಲ್ಲಿ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಮೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಬಾಲಕಾರ್ಮಿಕ ಇಲಾಖೆ ನಿರಂತರ ವಾಗಿ ಕಾರ್ಯಾಚರಣೆ ನಡೆಸಿದ್ದರಿಂದ ಕಳೆದ ಎರಡು ಸಾಲಿನಲ್ಲಿ 30ಕ್ಕೂ ಹೆಚ್ಚು ಬಾಲಕಾರ್ಮಿಕರನ್ನು ರಕ್ಷಿಸಿದ್ದಾರೆ. ಹಲವು ಮಕ್ಕಳು ಮಾಂಸದಂಗಡಿ, ಗ್ಯಾರೇಜ್‌
ಸೇರಿದಂತೆ ಹಲವು ಕಡೆಗಳಲ್ಲಿ ಕಾರ್ಮಿಕರಾಗಿ ತೊಡಗಿಸಿಕೊಂಡಿದ್ದು, ಶಾಶ್ವತವಾಗಿ ಶಿಕ್ಷಣಕ್ಕೆ ತಿಲಾಂಜಲಿ ಇಡುವ ಸಾಧ್ಯತೆ ದಟ್ಟವಾಗಿದೆ.

Advertisement

ಎಸ್ಸೆಸ್ಸೆಲ್ಸಿಬಳಿಕಕಾಲೇಜು ಮೆಟ್ಟಿಲು ತುಳಿಯುವುದರಲ್ಲಿ ಹೆಚ್ಚು ಬಹುಪಾಲು ಹೆಣ್ಣುಮಕ್ಕಳಿದ್ದಾರೆ. ಪ್ರೌಢ ಶಾಲೆ ಶಿಕ್ಷಣ ಮುಗಿಯುತ್ತಿದ್ದಂತೆ ಹೆಣ್ಣುಮಕ್ಕಳಿಗೆ ಪೋಷಕರು ಮದುವೆ ಮಾಡಲು ಮುಂದಾಗಿದ್ದಾರೆ. ಇದೇ ಪ್ರಮುಖ ಕಾರಣಕ್ಕೆ ಬಹುತೇಕ ವಿದ್ಯಾರ್ಥಿನಿಯರು ಕಾಲೇಜು ಮೆಟ್ಟಿಲು ಹತ್ತುವ ಕನಸುಕನಸಾಗಿಯೇ ಉಳಿದಿದೆ ಎನ್ನಲಾಗುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಕರೆತರುವ ಪ್ರಯತ್ನ ಮಾಡುತ್ತಿದೆ. ಶಿಕ್ಷಣವಂತರಾದರೆ ಮಾತ್ರ ಮಕ್ಕಳ ಸರ್ವತೋಮುಖಅಭಿವೃದ್ಧಿ ಸಾಧ್ಯವಾಗುತ್ತದೆಎಂದು ಶಿಕ್ಷಣ ತಜ್ಞರು ಹೇಳುತ್ತಾರೆ.

ಜಿಲ್ಲೆಯಲ್ಲಿ ಪ್ರಸ್ತುತ 30 ಮಕ್ಕಳನ್ನು ಗುರುತಿಸಿದ್ದು, ಎಲ್ಲರನ್ನು ಮತ್ತೆ ಶಾಲೆಗೆಕರೆತರುವ ಪ್ರಯತ್ನ ನಡೆದಿದೆ. ಇದರಲ್ಲಿ ಪ್ರೌಢಶಾಲೆ ಬಳಿಕ ಶಿಕ್ಷಣ ಮೊಟಕುಗೊಳಿಸಿದವರ ಸಂಖ್ಯೆ ಹೆಚ್ಚಿದೆ.ಇದರಲ್ಲಿ ಎರಡು ವರ್ಗ ಗಳಿದ್ದು, ಶಾಲೆಗೆ ದಾಖಲಾಗಿ ಹಾಜರಾಗದಿರುವುದು, ಶಾಲೆಗೆ ದಾಖಲಾಗದಿರುವುದು. ಈ ರೀತಿಯಮಕ್ಕಳಬಗ್ಗೆ ನಿಗಾವಹಿಸಲಾಗಿದೆ.
ಗಂಗಮಾರೇಗೌಡ, ಜಿಲ್ಲಾ ಉಪನಿರ್ದೇಶಕರು, 
ಸಾರ್ವಜನಿಕ ಶಿಕ್ಷಣ ಇಲಾಖೆ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next