Advertisement

ತಮಿಳುನಾಡಿಗೆ 530 ಟಿಎಂಸಿ ನೀರು

11:41 PM Oct 21, 2022 | Team Udayavani |

ಮಂಡ್ಯ: 48 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ದಾಖಲೆ ಪ್ರಮಾಣದ 530 ಟಿಎಂಸಿ ನೀರು ಹರಿದು ಹೋಗಿದೆ.

Advertisement

ಜುಲೈ 20ರಂದು ಕೆಆರ್‌ಎಸ್‌ ಜಲಾಶಯ ಗರಿಷ್ಠ ಮಟ್ಟ 124.80 ಅಡಿಗೆ ಭರ್ತಿಯಾಗಿತ್ತು. ಅಂದಿನಿಂದ ಆಗಸ್ಟ್‌ 3ರವರೆಗೂ ಗರಿಷ್ಠ ಮಟ್ಟ ಕಾಯ್ದುಕೊಂಡಿದೆ. ಆ. 4ರಂದು ಜಲಾಶಯದ ಒಳಹರಿವು 67,712 ಕ್ಯೂಸೆಕ್‌ ಹರಿದು ಬರುತ್ತಿರುವುದರಿಂದ ಹೊರಹರಿವನ್ನು 68,100 ಕ್ಯೂಸೆಕ್‌ಗೆ ಹೆಚ್ಚಿಸಲಾಗಿತ್ತು.

ಆಗಸ್ಟ್‌ 1ಕ್ಕೆ ಒಳಹರಿವು 23,081 ಕ್ಯೂಸೆಕ್‌ ಇತ್ತು. ಈಗ ಪ್ರಸ್ತುತ 74,726 ಕ್ಯೂಸೆಕ್‌ ಹರಿದು ಬರುತ್ತಿದೆ. ಇದರಿಂದ ಹೊರಹರಿವನ್ನು 78,316 ಕ್ಯೂಸೆಕ್‌ಗೆ ಏರಿಸಲಾಗಿದೆ. ಆ.6ರಂದು 74,068 ಕ್ಯೂಸೆಕ್‌ಗೆ ಏರಿಕೆ ಕಂಡಿತ್ತು. ಅನಂತರ ಅಲ್ಲಿಂದ ಆ. 18ಕ್ಕೆ 9,144 ಕ್ಯೂಸೆಕ್‌ಗೆ ಇಳಿದಿತ್ತು. 19ರಂದು ಏರಿಕೆ ಕಂಡಿದ್ದ ಒಳಹರಿವು 31ಕ್ಕೆ 21562 ಕ್ಯೂಸೆಕ್‌ ನೀರು ಹರಿದು ಬರುತ್ತಿತ್ತು. ಸೆ.3ಕ್ಕೆ 26247 ಕ್ಯೂಸೆಕ್‌ಗೆ ಏರಿತ್ತು. ಅನಂತರ ಅ. 18ರಂದು ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಜಲಾಶಯ ಭರ್ತಿಯಾಗಿತ್ತು. ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ ತಲುಪಿತ್ತು.

Advertisement

Udayavani is now on Telegram. Click here to join our channel and stay updated with the latest news.

Next