Advertisement

ನೂರು ದಿನಗಳಲ್ಲಿ 505 ಮಕ್ಕಳು, ಮಹಿಳೆಯರ ರಕ್ಷಣೆ

11:35 AM Nov 08, 2017 | Team Udayavani |

ಬೆಂಗಳೂರು: ಕಳೆದ ನೂರು ದಿನಗಳಲ್ಲಿ “ರೈಲ್ವೆ ರಕ್ಷಣಾ ದಳ’ (ಆರ್‌ಪಿಎಫ್‌)ವು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ರೈಲು ನಿಲ್ದಾಣಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಕಳೆದುಹೋಗಿದ್ದ 505 ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿದೆ. 

Advertisement

“ಆಪರೇಷನ್‌ ನನ್ಹೇ ಫರಿಶ್ತೆ’ ಶೀರ್ಷಿಕೆ ಅಡಿ ಈ ಕಾರ್ಯಾಚರಣೆ ನಡೆದಿದ್ದು, ರಕ್ಷಿಸಿದ 505 ಜನರಲ್ಲಿ 438 ಮಕ್ಕಳು ಕರ್ನಾಟಕ ಮೂಲದವರಾಗಿದ್ದು, ಈ ಪೈಕಿ 400ಕ್ಕೂ ಅಧಿಕ ಮಕ್ಕಳನ್ನು ಆಧಾರ್‌ ಸಹಾಯದಿಂದ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಆರ್‌ಪಿಎಫ್‌ ಸುರಕ್ಷತಾ ಆಯುಕ್ತೆ ದೇವಶ್ಮಿತಾ ಚಟ್ಟೋಪಾಧ್ಯಾಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಉಳಿದಂತೆ ಬಿಹಾರದ 12, ಆಂಧ್ರ ಪ್ರದೇಶದ 8, ಉತ್ತರ ಪ್ರದೇಶದ 7, ಅಸ್ಸಾಂನ 6, ಮಹಾರಾಷ್ಟ್ರ, ತಮಿಳುನಾಡು, ಒರಿಸ್ಸಾ, ಪಶ್ಚಿಮ ಬಂಗಾಳದ ತಲಾ 4, ರಾಜಸ್ತಾನ, ಜಾರ್ಖಂಡ್‌ನ‌ ತಲಾ 3, ಗುಜರಾತ್‌, ಅರುಣಾಚಲ್‌, ತೆಲಂಗಾಣ, ಗೋವಾ, ಮಧ್ಯಪ್ರದೇಶ, ದೆಹಲಿಯ ತಲಾ 2 ಮಕ್ಕಳನ್ನು ರಕ್ಷಿಸಲಾಗಿದೆ ಎಂದರು.

ಈ ಹಿಂದೆ ನಿಲ್ದಾಣಗಳಲ್ಲಿ ಕಳೆದು ಹೋದ ಮಕ್ಕಳನ್ನು ಸರ್ಕಾರೇತರ ಸಂಘ-ಸಂಸ್ಥೆಗಳು ನೋಡಿಕೊಳ್ಳುತ್ತಿದ್ದವು. ಇದೀಗ ಆರ್‌ಪಿಎಫ್‌ ಸಂಪೂರ್ಣ ಆಧಾರ್‌ ಮಾಹಿತಿ ಹೊಂದಿದ್ದು, ಅದರ ಆಧಾರದಲ್ಲಿ ಕಳೆದುಹೋದ ಮಕ್ಕಳು ಅಥವಾ ಮನೆ ಬಿಟ್ಟು ಬಂದ ಮಕ್ಕಳನ್ನು ಸುರಕ್ಷಿತವಾಗಿ ಸಂಬಂಧಪಟ್ಟವರಿಗೆ ಸೇರಿಸಲಾಗುತ್ತಿದೆ ಎಂದು ಹೇಳಿದರು. 

ನೈಋತ್ಯ ರೈಲ್ವೆಯ ರೈಲ್ವೆ ಪ್ರೊಟೆಕ್ಷನ್‌ ಫೋರ್ಸ್‌ ತಲಾ 8 ಸಿಬ್ಬಂದಿ ಹೊಂದಿದ್ದ 3 ತಂಡ ರಚಿಸಿ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಇದರಲ್ಲಿ ಬೆಂಗಳೂ ರಿನಲ್ಲಿ 246, ಹುಬ್ಬಳ್ಳಿಯಲ್ಲಿ 124 ಮತ್ತು ಮೈಸೂರಿನಲ್ಲಿ 135 ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಲಾಗಿದೆ. 

Advertisement

ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನೈಋತ್ಯ ರೈಲ್ವೆ ಆರ್‌ಪಿಎಫ್‌ ಇಂತಹ ಒಂದು ವಿಶೇಷ ಕಾರ್ಯಾಚರಣೆ ನಡೆಸಿದೆ. ಹುಬ್ಬಳ್ಳಿ ಮತ್ತು ಮೈಸೂರು ರೈಲ್ವೆ ನಿಲ್ದಾಣಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲೇ ಅತ್ಯಧಿಕ ಮಕ್ಕಳು ಮತ್ತು ಮಹಿಳೆಯರನ್ನು ಆರ್‌ಪಿಎಫ್‌ ರಕ್ಷಿಸಿದೆ.

ಕೇಂದ್ರ ಸರ್ಕಾರ ನೀಡುವ ಮಾಹಿತಿಂತೆ ಪ್ರತಿ 8 ನಿಮಿಷಕ್ಕೊಂದು ಮಗು ಅಪಹರಣಕ್ಕೆ ಒಳಗಾಗುತ್ತದೆ. ಆರ್‌ಪಿಎಫ್‌ ರಕ್ಷಿಸಿದ 505 ಮಕ್ಕಳು ಮತ್ತು ಮಹಿಳೆಯರಲ್ಲಿ 451 ಗಂಡು ಮತ್ತು 54 ಹೆಣ್ಣು ಮಕ್ಕಳು-ಮಹಿಳೆಯರಿದ್ದಾರೆ. ಪ್ರಮುಖವಾಗಿ ಆರ್‌ಪಿಎಫ್‌ ಕಳೆದ ನೂರು ದಿನಗಳಲ್ಲಿ 6 ಹೆಣ್ಣುಮಕ್ಕಳ ಅಪಹರಣ ಪ್ರಕರಣವನ್ನು ಭೇದಿಸಿದೆ. 61 ಬಾಲಕಾರ್ಮಿಕ, ಅಂಗಾಗ ಮಾರಾಟ ಪ್ರಕರಣ, 438 ಮನೆ ಬಿಟ್ಟು ಬಂದ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next