Advertisement

ಐವರು ಭಾರತೀಯರ ಅಪಹರಣ

05:15 AM May 08, 2019 | mahesh |

ಹೊಸದಿಲ್ಲಿ: ಐವರು ಭಾರತೀಯ ನಾವಿಕರನ್ನು ನೈಜೀರಿಯಾದ ಕಡಲ್ಗಳ್ಳರು ಅಪಹರಿಸಿದ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ನೈಜೀರಿಯಾದ ಭಾರತೀಯ ರಾಯಭಾರಿ ಜೊತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಚರ್ಚಿಸಿದ್ದಾರೆ. ಅಲ್ಲದೆ ನೈಜೀರಿಯಾ ಸರಕಾರದ ಮೇಲೆ ಒತ್ತಡ ತಂದು ಆದಷ್ಟು ಬೇಗ ಭಾರತೀಯರ ನಾವಿಕರ ಬಿಡುಗಡೆ ಮಾಡಿರುವಂತೆ ಸೂಚಿಸಿದ್ದಾರೆ. ಜೊತೆಗೆ ಈ ಬಗ್ಗೆ ವರದಿ ನೀಡಲು ನಿರ್ದೇಶಿಸಿದ್ದಾರೆ. ‘ನಾನು ಅಪಹರಣ ಕುರಿತ ವರದಿಗಳನ್ನು ನೊಡಿದ್ದೇನೆ. ಈ ಕುರಿತು ಕೂಡಲೇ ಕ್ರಮಕ್ಕೆ ರಾಯಭಾರಿಗೆ ಸೂಚಿಸಿದ್ದೇನೆ’ ಎಂದು ಸುಷ್ಮಾ ಟ್ವೀಟ್ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next