Advertisement

450 ಕಾರ್ಮಿಕರು ಹೊರ ರಾಜ್ಯಕ್ಕೆ

06:47 AM May 21, 2020 | Team Udayavani |

ತುಮಕೂರು: ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದ ಹೊರ ರಾಜ್ಯದ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಜಿಲ್ಲಾಡಳಿತ ಕಳು ಹಿಸುವ ವ್ಯವಸ್ಥೆ ಮಾಡಿರುವ ಪರಿಣಾಮ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದು  ಜಿಲ್ಲೆಯಿಂದ ಒಟ್ಟು 450 ಕಾರ್ಮಿಕರು ಹೊರ ರಾಜ್ಯಕ್ಕೆ ತೆರಳಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಿಂದ, ತುಮಕೂರು ನಗರ ಪೊಲೀಸ್‌ ಠಾಣಾ ವ್ಯಾಪ್ತಿ ಯಲ್ಲಿದ್ದ 50 ಜನ ಬಿಹಾರದ ಕಾರ್ಮಿ ಕರು, ತಿಪಟೂರು  ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದ 100 ಜನ ಬಿಹಾರ ರಾಜ್ಯದ ಕಾರ್ಮಿಕರು, ತಿಲಕ್‌ ಪಾರ್ಕ್‌ ಪೊಲೀಸ್‌ ಠಾಣಾ  ವ್ಯಾಪ್ತಿಯಲ್ಲಿದ್ದ 50 ಜನ ಬಿಹಾರ ರಾಜ್ಯದ ಕಾರ್ಮಿಕರು,

ಕೋರಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದ 50 ಜನ ಬಿಹಾರ  ರಾಜ್ಯದ ಕಾರ್ಮಿಕರು, ಗುಬ್ಬಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದ 50 ಜನ ಬಿಹಾರ ರಾಜ್ಯದ ಕಾರ್ಮಿಕರು ಮತ್ತು ಚೇಳೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದ 50 ಜನ ಜಾಖಂìಡ್‌ ರಾಜ್ಯದ ಕಾರ್ಮಿಕರು ಹಾಗೂ ಜಯನಗರ ಪೊಲೀಸ್‌  ಠಾಣಾ ವ್ಯಾಪ್ತಿಯಲ್ಲಿದ್ದ 50 ಜನ ಉತ್ತರ ಪ್ರದೇಶ ರಾಜ್ಯದ ಕಾರ್ಮಿಕರು, ಹೊಸ ಬಡಾ ವಣೆ, ತುಮಕೂರು ನಗರ ಮತ್ತು ಚೇಳೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿದ್ದ 50 ಜನ ಉತ್ತರ ಪ್ರದೇಶ ರಾಜ್ಯದ ಕಾರ್ಮಿಕರು,

ಒಟ್ಟು 450 ಜನ ಕಾರ್ಮಿಕರನ್ನು, 18 ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಕೋಲಾರ ಜಿಲ್ಲೆಯ ಮಾಲೂರು ರೈಲ್ವೆ ನಿಲ್ದಾಣಕ್ಕೆ ಹಾಗೂ ಬೆಂಗಳೂರು ಚಿಕ್ಕ ಬಾಣಾವರ ರೈಲ್ವೆ ನಿಲ್ದಾಣಕ್ಕೆ ಕಳುಹಿಸಿರುತ್ತಾರೆ. ಜಿಲ್ಲಾಡಳಿತದ ವತಿಯಿಂದ ಸದರಿ  ಕಾರ್ಮಿಕರನ್ನು  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಎಲ್ಲಾ ಬಸ್‌ಗಳಲ್ಲಿ ಸಂಬಂಧ ಪಟ್ಟ ಠಾಣೆಯಿಂದ ಒಬ್ಬರು ಸಿಬ್ಬಂದಿಯನ್ನು ಬಸ್‌ನಲ್ಲಿ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next