Advertisement

438 ಹಿರಿಯರ ಮನೆಗಳಿಗೆ ಪೊಲೀಸರ ಭೇಟಿ: ನೈತಿಕ ಸ್ಥೈರ್ಯ

11:46 PM Aug 06, 2023 | Team Udayavani |

ಮಂಗಳೂರು: ಹಿರಿಯ ನಾಗರಿಕರ ಮನಸ್ಥೈರ್ಯ ಹೆಚ್ಚಿಸಲು ಪೂರಕ ವಾಗುವಂತೆ ಪೊಲೀಸ್‌ ಇಲಾಖೆಯಿಂದ ಕೌನ್ಸೆಲಿಂಗ್‌ ನಡೆಸಲಾಗುವುದು ಎಂದು ಪೊಲೀಸ್‌ ಆಯುಕ್ತರು ತಿಳಿಸಿದಂತೆ ರವಿವಾರ ಪೊಲೀಸ್‌ ಸಿಬಂದಿ ವಿವಿಧ ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು.

Advertisement

ಕಮಿಷನರೆಟ್‌ ವ್ಯಾಪ್ತಿಯ ಎಲ್ಲ ಠಾಣೆಗಳಿಗೆ ಸಂಬಂಧಿಸಿದಂತೆ 438 ಮನೆಗಳಿಗೆ ಭೇಟಿ ನೀಡಲಾಗಿದೆ. ಉರ್ವ ಠಾಣೆಯೊಂದರ ಸಿಬಂದಿ 100ಕ್ಕೂ ಅಧಿಕ ಹಿರಿಯ ನಾಗರಿಕರನ್ನು ಪೊಲೀಸರು ಭೇಟಿ ಮಾಡಿ ಮಾತನಾಡಿದ್ದಾರೆ.

ಶನಿವಾರ ನಡೆದ ಪೊಲೀಸ್‌ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಾಮಂಜೂರಿನ ಓರ್ವರು ಕರೆ ಮಾಡಿ, ಮನೆಯಲ್ಲಿ ಒಂಟಿಯಾಗಿ ವಾಸವಾಗಿರುವ ಹಿರಿಯ ನಾಗರಿಕರು ಮಾನಸಿಕವಾಗಿ ಕುಗ್ಗಿ ಗೊಂದಲದಲ್ಲಿದ್ದಾರೆ ಎಂದು ತಿಳಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next