Advertisement

ಪ್ರಯಾಣಿಕನಿಂದ 41.78 ಲಕ್ಷ ರೂ. ಕಾಳಧನ ವಶಕ್ಕೆ

12:48 AM Jul 06, 2023 | Team Udayavani |

ಮಂಜೇಶ್ವರ: ಬಸ್‌ ಪ್ರಯಾಣಿಕನಿಂದ 41.78 ಲಕ್ಷ ರೂ. ಕಾಳಧನವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಕರ್ನಾಟಕ ಹೊನ್ನಾವರ ನಿವಾಸಿ ಪ್ರಕಾಶ್‌ ವಿನಯ್‌ ಶೇs… (45)ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement

ಬುಧವಾರ ಬೆಳಗ್ಗೆ ಸುಮಾರು 7 ಗಂಟೆಗೆ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇನ್ಸ್‌ಪೆಕ್ಟರ್‌ ಎಂ.ಯೂನಸ್‌ ನೇತೃತ್ವದಲ್ಲಿ ನಡೆಸಿದ ವಾಹನ ತಪಾಸಣೆ ಸಂದರ್ಭದಲ್ಲಿ ಕಾಳಧನ ಪತ್ತೆಯಾಯಿತು. ಬಸ್‌ನಲ್ಲಿ ಕಾಳಧನ ಸಾಗಿಸುತ್ತಿರುವ ಬಗ್ಗೆ ಲಭಿಸಿದ ರಹಸ್ಯ ಮಾಹಿತಿಯಂತೆ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಮಂಗಳೂರಿನಿಂದ ಕಾಸರಗೋಡಿಗೆ ಪ್ರಯಾಣಿಸುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಿಂದ ಕಾಳಧನ ವಶಪಡಿಸಲಾಗಿದೆ.

ಬಸ್‌ನ ಸೀಟಿನಡಿಯಲ್ಲಿ ಇಟ್ಟಿದ್ದ ಬ್ಯಾಗ್‌ನಿಂದ ಹಣ ಪತ್ತೆಯಾಗಿದೆ. ಈ ಹಣದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ವಶಕ್ಕೆ ತೆಗೆದುಕೊಂಡ ಪ್ರಕಾಶ್‌ ವಿನಯ್‌ ಶೇಖ್‌ನನ್ನು ಹಾಗು ಹಣವನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಾಸರಗೋಡು ಅಥವಾ ಕಾಂಞಂಗಾಡ್‌ಗೆ ತಲುಪಿದಾಗ ಫೋನ್‌ ಕರೆ ಬರುತ್ತದೆ. ಆಗ ತಿಳಿಸುವ ವ್ಯಕ್ತಿಗೆ ಈ ಹಣವನ್ನು ನೀಡುವಂತೆ ತನ್ನಲ್ಲಿ ತಿಳಿಸಲಾಗಿತ್ತೆಂದು ಪ್ರಕಾಶ್‌ ವಿನಯ್‌ ಶೇಖ್‌ ಹೇಳಿದ್ದಾನೆ.

ಪ್ರಿವೆಂಟೀವ್‌ ಆಫೀಸರ್‌ಗಳಾದ ಜನಾರ್ದನನ್‌, ಸುರೇಶ್‌ ಬಾಬು, ಸಿವಿಲ್‌ ಅಬಕಾರಿ ಅಧಿಕಾರಿಗಳಾದ ಮುಹಮ್ಮದ್‌ ಇಜಾಸ್‌, ಮಂಜುನಾಥನ್‌, ಅಖೀಲೇಶ್‌ ಮೊದಲಾದವರು ಕಾರ್ಯಾಚರಣೆ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next