Advertisement

ಟೈರ್‌ ಸ್ಫೋಟ, ರಸ್ತೆ ಬದಿ ನಿಂತವರಿಗೆ ಗುದ್ದಿದ ಕಾರು;ನಾಲ್ವರು ಬಲಿ 

02:00 PM Feb 13, 2019 | |

ದಾವಣಗೆರೆ: ಕಾರಿನ ಟೈರ್‌ ಏಕಾಏಕಿ ಸ್ಫೋಟಗೊಂಡು ರಸ್ತೆ ಬದಿಯಲ್ಲಿ ನಿಂತವರ ಮೇಲೆ ಹರಿದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಬುಧವಾರ ಸಂಜೆ ಹೊನ್ನಾಳಿಯ ದಿಡಗೂರು ಗ್ರಾಮದ ಬಳಿ ನಡೆದಿದೆ. 

Advertisement

ಕಾರು ಢಿಕ್ಕಿಯಾದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ  ರಮೇಶ್‌(40), ವರ್ಷಾ(25) ಮಗು ಚಂದ್ರಾ(3) ಮತ್ತು ಕಾರಿನ ಚಾಲಕ ಹಿರೇಮಠ(36) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಹೊನ್ನಾಳಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next