Advertisement

ಮುಜಫ‌ರನಗರ: ಶೀತ ಮಾರುತಕ್ಕೆ ನಾಲ್ಕು ಮಂದಿ ಬಲಿ

11:59 AM Jan 05, 2018 | udayavani editorial |

ಮುಜಫ‌ರನಗರ : ಉತ್ತರ ಪ್ರದೇಶದ ಮುಜಫ‌ರನಗರ ಮತ್ತು ಶಾಮ್ಲಿ ಜಿಲ್ಲೆಯಲ್ಲಿ ತೀವ್ರ ಶೀತ ಮಾರುತಗಳಿಗೆ ಗುರಿಯಾಗಿ ನಾಲ್ವರು ಮೃತಪಟ್ಟಿರುವುದಾಗಿ ಜಿಲ್ಲಾಡಳಿತೆ ತಿಳಿಸಿದೆ.

Advertisement

ಮಿರ್ನಾಪುರ ಪಟ್ಟಣದಲ್ಲಿ 70ರ ಹರೆಯದ ಖೇರಾತಿ, ಜನಸಾಥ್‌ ಪಟ್ಟಣದಲ್ಲಿ 40ರ ಹರೆಯದ ಕುಲದೀಪ್‌ ಅವರು ಶೀತ ಹವೆಯ ತೀವ್ರತೆಯನ್ನು ತಾಳಿಕೊಳ್ಳಲಾರದೆ ಮೃತಪಟ್ಟರೆ.

ಬಿಹಾರಿಗಢ ಗ್ರಾಮದ 50ರ ಹರೆಯದ ಕಾರ್ಮಿಕ ಬುಧ ಸಿಂಗ್‌ ಸಾಯಿನಿ ಮತ್ತು ಶಾಮ್ಲಿ ರೈಲ್ವೇ ಸ್ಟೇಶನ್‌ನಲ್ಲಿ ಪಪಾನ್‌ (48) ಶೀತಗಾಳಿಯ ಹೊಡೆತಕ್ಕೆ ಮರಗಟ್ಟಿ ಮೃತಪಟ್ಟರು. 

ಮುಜಫ‌ರನಗರದಲ್ಲಿ ಕಳೆದ ಅನೇಕ ದಿನಗಳಿಂದ ತಾಪಮಾನವು 3.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next