Advertisement

ಮಂಡ್ಯ:ಮದ್ಯ ಸೇವಿಸಿ ಅಸ್ವಸ್ಥ; ನಾಲ್ವರ ಸ್ಥಿತಿ ಗಂಭೀರ

09:42 AM May 10, 2019 | Team Udayavani |

ಮಂಡ್ಯ: ಮದ್ಯ ಸೇವಿಸಿದ ಬಳಿಕ ನಾಲ್ವರು ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಕೆ.ಆರ್‌.ಪೇಟೆಯ ಕೃಷ್ಣಾಪುರದಲ್ಲಿ ನಡೆದಿದೆ.

Advertisement

ಮಂಗಳವಾರ ಸಂಜೆ ಮದ್ಯದ ಅಂಗಡಿಯೊಂದರಲ್ಲಿ ಮಹದೇವ,ಸುರೇಶ್‌, ತಮ್ಮಯ್ಯ ಮತ್ತು ಯೋಗೇಶ್‌ ಮದ್ಯ ಸೇವಿದ್ದಾರೆ. ಕೂಡಲೇ ನಾಲ್ವರು ವಾಂತಿ , ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ.

ನಾಲ್ವರನ್ನು ಮೊದಲು ಕೆ.ಆರ್‌.ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು , ತನಿಖೆ ಮುಂದುವರಿದಿದೆ.

ಅವಧಿ ಮೀರಿದ ಮದ್ಯ ಸೇವಿಸಿ ನಾಲ್ವರು ಅಸ್ವಸ್ಥಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next