Advertisement

ರಾಜ್ಯಕ್ಕೆ ಕೇಂದ್ರದಿಂದ 348 ಕೋಟಿ ರೂ. ನೆರವು

08:30 PM Jul 12, 2023 | Team Udayavani |

ಹೊಸದಿಲ್ಲಿ: ಕರ್ನಾಟಕ ಸಹಿತ 22 ರಾಜ್ಯಗಳ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್)ಗೆ ಕೇಂದ್ರ ಸರಕಾರದ ವತಿಯಿಂದ 7,532 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 348.80 ಕೋಟಿ ರೂ. ನೆರವು ಸಿಕ್ಕಿದೆ. ಮಹಾರಾಷ್ಟ್ರಕ್ಕೆ ಅತಿ ಹೆಚ್ಚು ಅಂದರೆ 1,420.80 ಕೋಟಿ ರೂ., ಉತ್ತರ ಪ್ರದೇಶಕ್ಕೆ 812 ಕೋಟಿ ರೂ., ಒಡಿಶಾಕ್ಕೆ 704 ಕೋಟಿ ರೂ., ಬಿಹಾರಕ್ಕೆ 624 ಕೋಟಿ ರೂ. ನೆರವು ನೀಡಲಾಗಿದೆ.

Advertisement

ದೇಶಾದ್ಯಂತ ಹಲವು ರಾಜ್ಯಗಳಿಗೆ ಮಳೆ, ಪ್ರವಾಹದಿಂದ ತೊಂದರೆ ಉಂಟಾಗಿರುವಂತೆಯೇ ಕೇಂದ್ರ ವಿತ್ತ ಸಚಿವಾಲಯದ ಖರ್ಚು-ವೆಚ್ಚಗಳ ವಿಭಾಗ ನೆರವು ಬಿಡುಗಡೆ ಮಾಡಿದೆ. ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಹಾನಿ ಬಗ್ಗೆ ನೆರವು ನೀಡುವ ನಿಟ್ಟಿನಲ್ಲಿ ನಿಯಮಗಳನ್ನು ಬದಲಾಯಿಸಲಾಗಿದೆ. ಹೀಗಾಗಿ, ತಾನು ನೀಡಿದ ಮೊತ್ತವು ತತ್‌ಕ್ಷಣಕ್ಕೆ ಅನ್ವಯವಾಗುವಂತೆ ರಕ್ಷಣೆ ಮತ್ತು ಪರಿಹಾರ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಹಾಯವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next