Advertisement

325 ಕೆ.ಜಿ. ಶ್ರೀಗಂಧದ ತುಂಡುಗಳ ಕಳವು

10:37 AM Jul 14, 2019 | keerthan |

ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಬಳಿಯಿರುವ ಅರಣ್ಯ ಇಲಾಖೆ ಗೋದಾಮಿನ ಬೀಗ ಮುರಿದು 8.60 ಲಕ್ಷ ರೂ. ಮೌಲ್ಯದ 325 ಕೆ.ಜಿ. ಶ್ರೀಗಂಧದ ತುಂಡುಗಳನ್ನು ಕಳವು ಮಾಡಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.

Advertisement

ಅರಣ್ಯ ಇಲಾಖೆಯವರು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಶ್ರೀಗಂಧ ಮರದ ತುಂಡುಗಳನ್ನು ಭದ್ರತೆಯ ಗೋದಾಮಿನಲ್ಲಿ ದಾಸ್ತಾನಿರಿಸುತ್ತಿದ್ದು, ಕಳವು ವಿಚಾರ ಅನುಮಾನಕ್ಕೆ ಕಾರಣವಾಗಿದೆ.

ಶ್ರೀಗಂಧದ ತುಂಡುಗಳ ಜತೆಗೆ ಇಲಾಖೆಯ ತಡೆಬೇಲಿ ತಂತಿಗಳನ್ನೂ ದಾಸ್ತಾನಿರಿಸಲಾಗಿದೆ. ಶನಿವಾರ ಸಿಬಂದಿಯೊಬ್ಬರು ತಂತಿಗಳನ್ನು ತೆಗೆಯುವುದಕ್ಕೆ ತೆರಳಿದಾಗ ಬೀಗ ಮುರಿ ದಿದ್ದು, ಶ್ರೀಗಂಧದ ತುಂಡು ಗಳು ಕಳವಾಗಿರುವುದು ತಿಳಿದುಬಂದಿದೆ.

ಜು. 2ರಂದು ಇಲಾಖೆಯ ಸಿಬಂದಿ ಕೊನೆಯ ಬಾರಿಗೆ ಗೋದಾಮಿನ ಬೀಗ ತೆರೆದು ತಂತಿ ಬೇಲಿಯನ್ನು ತೆಗೆದಿದ್ದು, ಬಳಿಕ ಅದರೊಳಗೆ ಯಾರೂ ಪ್ರವೇಶಿಸಿಲ್ಲ. ಕಳ್ಳರು ಬೀಗವನ್ನು ತುಂಡು ಮಾಡಿ ಒಳಗೆ ಪ್ರವೇಶಿಸಿದ್ದು, ಬಳಿಕ ಯಾರ ಗಮನಕ್ಕೂ ಬಾರದಂತೆ ಗಮ್ಮಿನ ಮೂಲಕ ಅಂಟಿಸಿದ್ದಾರೆ. ಘಟನೆಯು ಒಂದು ವಾರದ ಮುಂಚೆ ನಡೆದಿರುವ ಸಾಧ್ಯತೆ ಇದೆ. ಗಂಧ ತುಂಡುಗಳನ್ನು ಕಾಂಪೌಡಿನ ಹೊರಗೆ ಸಾಗಿಸಿ ಬಳಿಕ ವಾಹನದ ಮೂಲಕ ಕೊಂಡೊಯ್ದಿರ‌ಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

ಫಾರೆಸ್ಟರ್‌ ನಿವಾಸದ ಸಮೀಪದಲ್ಲೇ ಕೃತ್ಯ
ಬೆಳ್ತಂಗಡಿ ಫಾರೆಸ್ಟರ್‌ ಅವರ ವಸತಿ ಗೃಹ ಗೋದಾಮಿನ ಪಕ್ಕದಲ್ಲಿದ್ದು, ಅವರು ಕಳೆದ ಕೆಲವು ದಿನಗಳ ಹಿಂದೆ ರಜೆಯ ಮೇಲೆ ಊರಿಗೆ ತೆರಳಿದ್ದು, ಕಳ್ಳರು ಅವರು ಇಲ್ಲದಿರುವ ಮಾಹಿತಿ ತಿಳಿದುಕೊಂಡೇ ಕಳವು ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಗೋದಾಮಿನಲ್ಲಿ ಸುಮಾರು 400 ಕೆಜಿಯಷ್ಟು ಶ್ರೀಗಂಧ ದಾಸ್ತಾನಿದ್ದು, ಅದರಲ್ಲಿ 75 ಕೆಜಿಯಷ್ಟು ಅಲ್ಲೇ ಇವೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

ಇಲಾಖೆಯ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿಗಳಿಗೆ ಘಟನೆಯ ಮಾಹಿತಿ ನೀಡಿದ್ದು, ಅವರ ನಿರ್ದೇಶನದಂತೆ ಪ್ರಕರಣ ದಾಖಲಿಸಿ ಕೊಂಡು ತನಿಖೆಯ ನಡೆಸುತ್ತಿದ್ದಾರೆ. ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಅವರು ಡಿಎಫ್‌ಒಗೆ ಘಟನೆಯ ಕುರಿತು ವಿವರಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next