Advertisement

ರಾಜ್ಯದಲ್ಲಿಂದು 30309 ಪ್ರಕರಣ ಪತ್ತೆ ; 58395 ಜನರು ಗುಣಮುಖ

07:37 PM May 18, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳು ದೃಢ ಪಟ್ಟಿರುವ ಸಂಖ್ಯೆಗಿಂತ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ಹೆಚ್ಚು ಇದೆ.

Advertisement

ಇಂದು ( ಮೇ.18) ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ  ಕಳೆದ 24 ಗಂಟೆಗಳ ಅವಧಿ ( ದಿನಾಂಕ : 17.05.2021, 00:00 ರಿಂದ 23.59 ರವರೆಗೆ)ಯಲ್ಲಿ 30309 ಜನರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ಇರುವುದು ಪತ್ತೆಯಾಗಿದೆ. ಇದೇ ಅವಧಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ 58395.

ಇನ್ನು ಇಂದು 525 ಜನರು ಕೋವಿಡ್-19 ಸೋಂಕಿನಿಂದ ಮೃತ ಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಮಹಾಮಾರಿ ಸೋಂಕಿಗೆ ಇದುವರೆಗೆ 22838 ಜನರು ಬಲಿಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-295, ಬಳ್ಳಾರಿ-1799, ಬೆಳಗಾವಿ-2118, ಬೆಂಗಳೂರು ಗ್ರಾಮಾಂತರ-1339, ಬೆಂಗಳೂರು ನಗರ-8676, ಬೀದರ್-113, ಚಾಮರಾಜನಗರ-345, ಚಿಕ್ಕಬಳ್ಳಾಪುರ-339, ಚಿಕ್ಕಮಗಳೂರು-401, ಚಿತ್ರದುರ್ಗ-436, ದಕ್ಷಿಣ ಕನ್ನಡ-777, ದಾವಣಗೆರೆ-594, ಧಾರವಾಡ-969, ಗದಗ-543, ಹಾಸನ-834, ಹಾವೇರಿ-187, ಕಲಬುರಗಿ-548, ಕೊಡಗು-161, ಕೋಲಾರ-1021, ಕೊಪ್ಪಳ-523, ಮಂಡ್ಯ-606, ಮೈಸೂರು-1916, ರಾಯಚೂರು-493, ರಾಮನಗರ-427, ಶಿವಮೊಗ್ಗ-1168, ತುಮಕೂರು-1562, ಉಡುಪಿ-737, ಉತ್ತರ ಕನ್ನಡ-803, ವಿಜಯಪುರ-262, ಯಾದಗಿರಿ-317.

Advertisement
Advertisement

Udayavani is now on Telegram. Click here to join our channel and stay updated with the latest news.

Next