Advertisement

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

12:28 AM Jul 19, 2024 | Team Udayavani |

ಬಜಪೆ: ಫ‌ಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಕಾರಣ ಅದ್ಯಪಾಡಿ ಗ್ರಾಮದ ಕುದ್ರು ಹಾಗೂ ಮೊಗರು ಪ್ರದೇಶದ ಸುಮಾರು 30 ಮನೆಗಳು ಜಲಾವೃತಗೊಂಡಿವೆ.

Advertisement

ಕುದ್ರು ಹಾಗೂ ಮೊಗರು ಪ್ರದೇಶದ ಭತ್ತದ ಗದ್ದೆ, ಅಡಿಕೆ, ಬಾಳೆ ತೋಟಕ್ಕೂ ನೆರೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆ.

ಕುದ್ರು ಹಾಗೂ ಮೊಗರು ಪ್ರದೇಶದ ತಗ್ಗು ಪ್ರದೇಶದ ಜನರು ದೋಣಿ ಮೂಲಕ ಮನೆಗೆ ಹೋಗುತ್ತಿರುವ ದೃಶ್ಯ ಕಂಡು ಬಂತು. ಗುರುವಾರ ಶಾಲೆ ಇದ್ದ ಕಾರಣ ಶಾಲಾ ಮಕ್ಕಳು ಕೂಡ ದೋಣಿಯನ್ನೇ ಅವಲಂಬಿಸುವಂತಾಯಿತು.

ಕುದ್ರು ಪ್ರದೇಶದ 15 ಮನೆಗಳಿಗೆ ನೆರೆ ಆತಂಕ: ನದಿ ಪಕ್ಕದಲ್ಲೇ ಇರುವ ಕುದ್ರು ಪ್ರದೇಶದ 15 ಮನೆಗಳಿಗೆ ನೆರೆ ನುಗ್ಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next