Advertisement

ಶ್ರೀನಗರ : ಇಬ್ಬರು ಪಾಕಿಗಳ ಸಹಿತ 3 ಲಷ್ಕರ್‌ ಉಗ್ರರು ಮಟಾಷ್‌

12:09 PM Dec 05, 2017 | Team Udayavani |

ಶ್ರೀನಗರ : ದಕ್ಷಿಣ ಕಾಶ್ಮೀರದಲ್ಲಿ ನಡೆದಿರುವ ಎನ್‌ಕೌಂಟರ್‌ಗೆ ಇಬ್ಬರು ಪಾಕಿಗಳ ಸಹಿತ ಮೂವರು ಲಷ್ಕರ್‌ ಎ ತಯ್ಯಬ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ.

Advertisement

ಈ ಹತ ಉಗ್ರರು ಈ ವರ್ಷ ಜುಲೈನಲ್ಲಿ ಅಮರನಾಥ ಯಾತ್ರಿಗಳ ಮೇಲೆ ನಡೆದಿದ್ದ ದಾಳಿಗೆ ಹೊಣೆಗಾರರಾಗಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.

ಈ ಎನ್‌ಕೌಂಟರ್‌ ನಡೆದ ಸ್ಥಳದಿಂದ ಪರಾರಿಯಾಗಿದ್ದ 4ನೇ ಉಗ್ರನನ್ನು ದಕ್ಷಿಣ ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿನ ಹೆರಿಗೆ ಆಸ್ಪತ್ರೆಯಲ್ಲಿ ಪೊಲೀಸರು ಬಂಧಿಸಿದರು. 

ನಿನ್ನೆ ಸೋಮವಾರ ಮಧ್ಯಾಹ್ನ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕಾಜೀಗುಂದ್‌ ಎಂಬಲ್ಲಿ, ಶ್ರೀನಗರದತ್ತ ಹೋಗುತ್ತಿದ್ದ ಸೇನೆಯ ಸರತಿ ವಾಹನಗಳ ಮೇಲೆ ಈ ಉಗ್ರರು ಗುಂಡಿನ ದಾಳಿ ನಡೆಸಿದಾಗಲೇ ಎನ್‌ಕೌಂಟರ್‌ ಆರಂಭಗೊಂಡಿತ್ತು.

ಭದ್ರತಾ ಪಡೆಗಳು ಗುಂಡಿನ ಪ್ರತ್ಯುತ್ತರ ನೀಡಿದಾಗ ಉಗ್ರರು ಪಲಾಯನಗೈದು ಅಡಗಿಕೊಂಡರು. ಅನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next