Advertisement

ಶ್ರೀನಗರದಲ್ಲಿ ಭಯೋತ್ಪಾದಕ ದಾಳಿ ವಿಫ‌ಲ: 3 ಲಷ್ಕರ್‌ ಉಗ್ರರ ಹತ್ಯೆ

05:27 PM May 05, 2018 | udayavani editorial |

ಶ್ರೀನಗರ : ನಗರ ಹೊರವಲಯದಲ್ಲಿ ಇಂದು ಶನಿವಾರ ಬೆಳಗ್ಗೆ ಉಗ್ರರ ದೊಡ್ಡ ಮಟ್ಟದ ಸಂಭಾವ್ಯ ದಾಳಿಯನ್ನು ವಿಫ‌ಲಗೊಳಿಸಲಾಗಿರುವ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸಿಆರ್‌ಪಿಎಫ್ ದಳದವರ ನಾಲ್ಕು ತಾಸುಗಳ ಸುದೀರ್ಘ‌ ಜಂಟಿ ಕಾರ್ಯಾಚರಣೆಯಲ್ಲಿ  ಮೂವರು ಲಷ್ಕರ್‌ ಎ ತಯ್ಯಬ ಉಗ್ರರು ಹತರಾಗಿದ್ದಾರೆ. 

Advertisement

ಉಗ್ರರೊಂದಿಗಿನ ಕಾದಾಟದಲ್ಲಿ ನಾಲ್ವರು ಭದ್ರತಾ ಸಿಬಂದಿಗಳು ಗಾಯಗೊಂಡಿದ್ದಾರೆ; ಆದರೆ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಚಳಿಗಾಲದ ರಾಜಧಾನಿಯಾಗಿರುವ ಜಮ್ಮು ವಿನಿಂದ ಶ್ರೀನಗರಕ್ಕೆ  ರಾಜ್ಯ ಸರಕಾರಿ ಕಾರ್ಯಾಲಯಗಳು ಶಿಫ್ಟ್ ಆಗುವ ಮೇ 7ಕ್ಕೆ ಮುನ್ನ  ಶ್ರೀನಗರದಲ್ಲಿ  ದೊಡ್ಡ ಮಟ್ಟದ  ಭಯೋತ್ಪಾದಕ ದಾಳಿಯನ್ನು ನಡೆಸುವ ಯೋಜನೆ ಲಷ್ಕರ್‌ ಉಗ್ರರದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಇಂದು ಶನಿವಾರ ನಸುಕಿನ ವೇಳೆ ನಗರ ಹೊರವಲಯದ ಛತ್ತಬಾಲ್‌ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಾಗಿ ಅದು ನಾಲ್ಕು ತಾಸುಗಳ ಕಾಲ ಮುಂದುವರಿಯಿತು.

Advertisement

Udayavani is now on Telegram. Click here to join our channel and stay updated with the latest news.

Next