Advertisement

ಪದ್ಮ ಪ್ರಶಸ್ತಿಗೆ 3 ವೈದ್ಯರ ಹೆಸರು ಅಂತಿಮ : ಅರವಿಂದ ಕೇಜ್ರಿವಾಲ್‌

08:47 PM Aug 28, 2021 | Team Udayavani |

ನವ ದೆಹಲಿ : ಈ ಬಾರಿಯ ಪದ್ಮ ಪ್ರಶಸ್ತಿಗೆ ಮೂರು ವೈದ್ಯರ ಹೆಸರನ್ನು ಶಿಫಾರಸು ಮಾಡಲು ನವದೆಹಲಿ ಸರ್ಕಾರ ನಿರ್ಧರಿಸಿದೆ. ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ನೇತೃತ್ವದ ತಂಡವು ವೈದ್ಯರ ಹೆಸರನ್ನು ಅಂತಿಮಗೊಳಿಸಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

Advertisement

ರಾಷ್ಟ್ರದಲ್ಲಿ ಮೊದಲ ಪ್ಲಾಸ್ಮಾ ಬ್ಯಾಂಕ್‌ ಆರಂಭಿಸಿದ್ದ ಐಎಲ್‌ ಬಿಎಸ್‌ ಆಸ್ಪತ್ರೆಯ ಉಪಕುಲಪತಿ ಡಾ.ಎಸ್‌ ಕೆ.ಸರಿನ್‌, ಎಲ್‌ ಎನ್‌ ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್‌ ಕುಮಾರ್‌ ಮತ್ತು ಮ್ಯಾಕ್ಸ್‌ ಆಸ್ಪತ್ರೆಯ ಸಮೂಹ ನಿರ್ದೇಶಕ ಡಾ. ಸಂದೀಪ್‌ ಬುದ್ಧಿರಾಜ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ಇದನ್ನೂ ಓದಿ :ಮುಂದಿನ ದಿನಗಳಲ್ಲಿ ಕೆಎಚ್‌ಡಿಸಿ ನಿಗಮಕ್ಕೆ ಹೊಸ ಬೆಳಕು – ಸಿದ್ದು ಸವದಿ

ವೈದ್ಯರ ಹೆಸರನ್ನು ಮಾತ್ರವೇ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಜನರಿಗೆ ತಿಳಿಸಿದ್ದು, ಜನರಿಂದ ಹೆಸರನ್ನು ಕೇಳಿತ್ತು. 9427 ಜನರಿಂದ ಕೇಳಿಬಂದ 740 ವೈದ್ಯರ ಹೆಸರುಗಳಲ್ಲಿ ಈ ಮೂವರು ವೈದ್ಯರ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next