Advertisement

Arun Kumar Puthila ಸೇರ್ಪಡೆಗೆ ಮಾಜಿ ಶಾಸಕರಿಂದ 3 ಷರತ್ತು

11:44 PM Feb 02, 2024 | Team Udayavani |

ಪುತ್ತೂರು: ಪುತ್ತಿಲ ಪರಿವಾರ ಸ್ಥಾಪಿಸಿರುವ ಅರುಣ್‌ ಕುಮಾರ್‌ ಪುತ್ತಿಲ ಅವರು ಬಿಜೆಪಿ ಪಾಳಯ ಸೇರುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಹಸುರು ನಿಶಾನೆ ಸಿಕ್ಕಿದೆ.

Advertisement

ಇದೇ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಪುತ್ತಿಲ ಸೇರ್ಪಡೆಗೆ ಬಹಿರಂಗವಾಗಿ 3 ಷರತ್ತು ವಿಧಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.

ಸಂಘ ಪರಿವಾರ ಮತ್ತು ಬಿಜೆಪಿಯ ಉನ್ನತ ನಾಯಕರು ಪುತ್ತಿಲ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದರು. ಆರಂಭಿಕ ಹಂತ
ದಲ್ಲಿ ಇರಿಸಿದ್ದ ಬೇಡಿಕೆಯನ್ನು ಕೈ ಬಿಟ್ಟು ಮಂಡಲ ವ್ಯಾಪ್ತಿಯೊಳಗೆ ಜವಾಬ್ದಾರಿಯ
ಹುದ್ದೆ ನೀಡುವ ಒಪ್ಪಂದದೊಂದಿಗೆ ಮರಳಲು ಸಿದ್ಧತೆ ನಡೆಸಿತ್ತು. ಇದಕ್ಕೆ ಪೂರಕ ಎಂಬಂತೆ ಫೆ. 5ರಂದು ಪುತ್ತಿಲ ಪರಿವಾರದ ಸಮಾಲೋಚನೆ ಸಭೆಯನ್ನು ಆಯೋಜಿಸಲಾಗಿದೆ.

ಷರತ್ತುಗಳೇನು?
ವೀಡಿಯೊವೊಂದರಲ್ಲಿ ಮಾತನಾಡಿರುವ ಸಂಜೀವ ಮಠಂದೂರು ಅವರು, ಪುತ್ತಿಲ ಬಿಜೆಪಿಗೆ ಬರುವುದಕ್ಕೆ ಸ್ವಾಗತ. ಪಕ್ಷ ಸೇರ್ಪಡೆಗೆ ಮೊದಲು ಅವರು ತಮ್ಮ ಸಂಘಟನೆಯನ್ನು ವಿಸರ್ಜಿಸಬೇಕು ಹಾಗೂ ಹಿರಿಯರಿಗೆ ನೋವುಂಟು ಮಾಡುವ ರೀತಿಯಲ್ಲಿ ಆಡಿರುವ ಮಾತುಗಳಿಗೆ ವಿಷಾದ ವ್ಯಕ್ತಪಡಿಸಬೇಕು ಎಂದು ಹೇಳಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next