Advertisement

ಜಡಿಮಳೆ, ಮೇವು ಅಲಭ್ಯತೆ: ಸರಕಾರಿ ಕೇಂದ್ರದಲ್ಲಿ 25 ಗೋವುಗಳ ಸಾವು

05:32 PM Jul 07, 2017 | Team Udayavani |

ಕುರುಕ್ಷೇತ್ರ : ಜಡಿ ಮಳೆ ಹಾಗೂ ಮೇವು ಅಲಭ್ಯತೆಯ ಕಾರಣ ಮಥಾನಾ ಗ್ರಾಮದಲ್ಲಿನ ಸರಕಾರಿ ಗೋರಕ್ಷಣಾ ಕೇಂದ್ರದಲ್ಲಿ 25 ಗೋವುಗಳು ದಾರುಣವಾಗಿ ಸಾವಪ್ಪಿರುವ ಘಟನೆ ವರದಿಯಾಗಿದೆ. 

Advertisement

ನಿರಂತರವಾಗಿ ಸುರಿದ ಮಳೆಯಿಂದಾಗಿ ಗೋಶಾಲೆಯಲ್ಲಿ ನೀರು ತುಂಬಿಕೊಂಡಿತ್ತು. ಪರಿಣಾಮವಾಗಿ ಗೋವುಗಳು ಕೆಸರಿನಲ್ಲಿ  ಹುದುಗಿದವು. ಹಲವು ಗೋವುಗಳಿಗೆ ಮೇವು, ಆಹಾರ ಸಿಗದೆ ಅವು ಉಪವಾಸದಿಂದ ಸಾವಿನಂಚಿಗೆ ತಲುಪಿದವು; ಇನ್ನು ಕೆಲವು ಗೋವುಗಳ ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಅನಾರೋಗ್ಯಕ್ಕೆ ಗುರಿಯಾದವು ಎಂದು ಗ್ರಾಮದ ಮುಖ್ಯಸ್ಥ ಕಿರಣ್‌ ಬಾಲಾ ತಿಳಿಸಿದ್ದಾರೆ. 

ಹರಿಯಾಣ ಗೋ ಸೇವಾ ಆಯೋಗದ ಅಧ್ಯಕ್ಷ ಭನೀ ದಾಸ್‌ ಮಂಗ್ಲಾ  ಮತ್ತು ಕೆಲವು ಜಿಲ್ಲಾಡಳಿತ ಅಧಿಕಾರಿಗಳು ಗೋ ಕೇಂದ್ರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next