Advertisement

ಕೊರಟಗೆರೆ: 24 ಗ್ರಾ ಪಂಗೆ 24 ಸ್ವಚ್ಛತಾ ವಾಹಿನಿ ಹಸ್ತಾಂತರ; ಮಹಿಳೆಯರ ಹಬ್ಬ

08:03 PM Mar 25, 2022 | Team Udayavani |

ಕೊರಟಗೆರೆ: ವಿದೇಶದಲ್ಲಿ ಮಹಿಳೆಗೆ ಸಮಾನತೆ ಕಾನೂನಿನ ಪುಸ್ತಕದಲ್ಲಿ ಮಾತ್ರ ಸಿಮೀತ. ಭಾರತ ದೇಶದಲ್ಲಿ ಎಲ್ಲಾ ರಂಗದಲ್ಲಿಯು ಮಹಿಳೆಗೆ ವಿಶೇಷ ಸ್ಥಾನಮಾನ ದೊರೆತಿದೆ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ದೇಶದ ಮಹಿಳಾ ಪ್ರಧಾನಿಯಾಗಿ ೧೬ವರ್ಷ ಸೇವೆ ಸಲ್ಲಿಸಿದ ಕೀರ್ತಿ ಇಂದಿರಾಗಾಂಧಿಗೆ ಸಲ್ಲಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

Advertisement

ಕೊರಟಗೆರೆ ಪಟ್ಟಣದ ತಾಪಂ ಮತ್ತು ಸಂಜೀವಿನಿ ಅಭಿಯಾನ ನಿರ್ವಹಣಾ ಘಟಕ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜೂನಿಯರ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ 24 ಗ್ರಾಪಂಗಳ ಸ್ವಚ್ಚವಾಹಿನಿ ವಾಹನಗಳ ಲೋಕಾರ್ಷಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶದ ಸ್ವತಂತ್ರ ಪೂರ್ವದಲ್ಲಿ ಮಹಿಳೆ ಮನೆಗೆ ಮಾತ್ರ ಸಿಮೀತ. ಆದರೇ ನಮ್ಮ ದೇಶಕ್ಕೆ ಸ್ವತಂತ್ರ ಬಂದ ನಂತರ ಮಹಿಳೆಗೆ ವಿಶೇಷ ಸ್ಥಾನಮಾನ ಲಭಿಸಿದೆ. ಭಾರತ ದೇಶದ ಮಹಿಳೆ ಇಂದು ಗಡಿಭಾಗದ ಕಾವಲು ಸೇರಿದಂತೆ ಯುದ್ದ ಭೂಮಿಯಲ್ಲಿ ಹೋರಾಡುವ ಸಾಮಾಥ್ಯ ಪಡೆದಿದ್ದಾಳೆ. ಹೆಣ್ಣು ಮಕ್ಕಳನ್ನು ಯಾರು ಕುರಿ-ಮೇಕೆ ಕಾಯಲು ಕಲಿಸಬೇಡಿ. ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಉತ್ತಮ ಶಿಕ್ಷಣ ಕೊಡಿಸಬೇಕಿದೆ ಎಂದು ಆಗ್ರಹ ಮಾಡಿದರು.

ನಮ್ಮ ಭಾರತ ದೇಶದ ಪ್ರತಿಯೊಂದು ಕುಟುಂಬದ ಗೌರವವೇ ಹೆಣ್ಣು. ಯುದ್ದ ಭೂಮಿಯಲ್ಲಿ ಮಹಿಳಾ ಪತ್ರಕರ್ತರು ಸಹ ಸೇವೆ ಸಲ್ಲಿಸುತ್ತೀದ್ದಾರೆ. ಭಾರತ ದೇಶದ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ನಮ್ಮ ಕೊರಟಗೆರೆ ತಾಲೂಕಿನಲ್ಲಿ ಸುಮಾರು ೧ಕೋಟಿ ೨೦ಲಕ್ಷ ವೆಚ್ಚದಲ್ಲಿ ೨೪ಗ್ರಾಪಂಗೆ ೨೪ಸ್ವಚ್ಚತಾ ವಾಹಿನಿಗಳನ್ನು ಹಸ್ತಾಂತರ ಮಾಡಲಾಗಿದೆ. ಸ್ವಚ್ಚತಾ ವಾಹಿನಿಗಳ ನಿರ್ವಹಣೆಯನ್ನು ಮಹಿಳೆಯರಿಗೆ ವಹಿಸಲಾಗಿದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿಜಿಪಂ ಉಪಕಾರ್ಯದರ್ಶಿ ಅಥಿಕ್‌ಪಾಷ, ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅರಕೆರೆಶಂಕರ್, ತಾಪಂ ಆಡಳಿತಾಧಿಕಾರಿ ದೀಪಶ್ರೀ, ಪಪಂ ಅಧ್ಯಕ್ಷೆ ಕಾವ್ಯರಮೇಶ್, ಉಪಾಧ್ಯಕ್ಷೆ ಭಾರತಿಸಿದ್ದಮಲ್ಲಪ್ಪ, ಪಪಂ ಮುಖ್ಯಾಧಿಕಾರಿ ಲಕ್ಷö್ಮಣ್, ತಾಪಂ ಇಓ ದೊಡ್ಡಸಿದ್ದಪ್ಪ, ಕೃಷಿ ನಿರ್ದೇಶಕ ನಾಗರಾಜು, ಸಿಡಿಪಿಓ ಅಂಬಿಕಾ, ೨೪ಗ್ರಾಪಂಯ ಪಿಡಿಓ, ಕಾರ್ಯದರ್ಶಿ ಸೇರಿದಂತೆ ಮಹಿಳಾ ಸಂಘದ ಸದಸ್ಯರು ಇತರರು ಇದ್ದರು.

ಮಹಿಳಾ ಸದಸ್ಯರಿಂದ ಸ್ವಯಂ ಉದ್ಯೋಗ
ಕೊರಟಗೆರೆ ಕ್ಷೇತ್ರದಲ್ಲಿ 568 ಸ್ತ್ರೀ ಶಕ್ತಿ ಸಂಘದ 11 ಸಾವಿರ ಸದಸ್ಯರು, ೯೬೫ ಸ್ವಸಹಾಯ ಸಂಘದ ೧೧೪೮೬ಜನ ಸದಸ್ಯರು, ೧೬೧೩ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ 32260 ಜನ ಮಹಿಳಾ ಸದಸ್ಯರು ಸೇರಿದಂತೆ ಒಟ್ಟಾರೇ56106 ಜನ ಮಹಿಳಾ ಸದಸ್ಯರು ಸಂಘಗಳ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ವಿಶೇಷ ಹೆಜ್ಜೆಯನ್ನು ಇಟ್ಟಿರುವುದೇ ದೇಶದ ಅಭಿವೃದ್ದಿಯ ಸಂಕೇತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಮಹಿಳೆಯರ ಹಬ್ಬವಾದ ಮಾರಾಟ ಮೇಳ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವು ಮಹಿಳೆಯರ ಹಬ್ಬವಾಗಿ ನಿರ್ಮಾಣವಾಗಿತ್ತು. ಕಾರ್ಯಕ್ರಮ ಸುತ್ತಮುತ್ತಲು ನಿರ್ಮಾಣವಾಗಿದ್ದ ೩೦ಕ್ಕೂ ಅಧಿಕ ಮಹಿಳೆಯರ ಸ್ವಯಂ ಉದ್ಯೋಗದ ಅಂಗಡಿ ಮಳಿಗೆಗಳಲ್ಲಿ ವಹಿವಾಟು ನಡೆಯಿತು. ಪ್ರತಿಯೊಂದು ಅಂಗಡಿಗೂ ಮಾಜಿ ಡಿಸಿಎಂ ಭೇಟಿ ನೀಡಿ ಮಾಹಿತಿ ಪಡೆದದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next