Advertisement

22 ಫಲಾನುಭವಿಗಳಿಗೆ ನಿವೇಶನ ಪತ್ರ ವಿತರಣೆ

07:17 AM Jun 15, 2020 | Suhan S |

ಕುಮಟಾ: ತಾಲೂಕಿನ ಬಗ್ಗೋಣ ಗ್ರಾಮದಲ್ಲಿ ಮಂಜೂರಾದ 22 ನಿವೇಶನಗಳ ಫಲಾನುಭವಿಗಳಿಗೆ ಶಾಸಕ ದಿನಕರ ಶೆಟ್ಟಿ ಪಟ್ಟಣದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಪಹಣಿ ಪತ್ರಿಕೆ ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ತಾಲೂಕಿನ ಸರ್ಕಾರಿ ಜಮೀನಿನಲ್ಲಿ ಕೆಲವರು ಅನೇಕ ವರ್ಷಗಳಿಂದ ಮನೆ ನಿರ್ಮಿಸಿಕೊಂಡು, ವಾಸವಾಗಿದ್ದಾರೆ. ಆದರೆ ಅವರ ಹೆಸರಿನಲ್ಲಿ ಇನ್ನೂ ಆರ್‌ಟಿಸಿ ಆಗಿಲ್ಲ. ತಾಲೂಕಿನಾದ್ಯಂತ ಇಂ ಪ್ರಕರಣಗಳು ಸಾಕಷ್ಟಿವೆ. ಈ ಹಿಂದೆಯೂ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಇಂಥ ಪ್ರಕರಣಗಳಲ್ಲಿ ಸಿಲುಕಿಕೊಂಡ ಹಲವರಿಗೆ ಆರ್‌ಟಿಸಿ ಮಾಡಿಸಿಕೊಟ್ಟಿದ್ದೇನೆ. ಈ ಬಾರಿ ಇದು ಮೊದಲ ಪ್ರಕರಣವಾಗಿದ್ದು, ಪಟ್ಟಣ ವ್ಯಾಪ್ತಿಯಲ್ಲಿಯೇ 22 ನಿವೇಶನದ ಆರ್‌ಟಿಸಿ ಮಾಡಿಸಿಕೊಟ್ಟಿದ್ದೇನೆ ಎಂದರು.

ಉಪವಿಭಾಗಾಧಿಕಾರಿ ಎಂ.ಅಜೀತ್‌ ರೈ, ತಹಶೀಲ್ದಾರ್‌ ಮೇಘರಾಜ ನಾಯ್ಕ ಬಿಜೆಪಿ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಪುರಸಭೆ ಸದಸ್ಯರಾದ ಶೈಲಾ ಗೌಡ, ಮೋಹಿನಿ ಗೌಡ, ಮಹೇಶ ನಾಯಕ ವನ್ನಳ್ಳಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ಬಗ್ಗೋಣ, ಪ್ರಮುಖರಾದ ಕಿಶನ ವಾಳ್ಕೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next