Advertisement

ಮಂಡ್ಯ: 207 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು : 79 ಮಂದಿ ಬಿಡುಗಡೆ

08:40 PM Sep 28, 2020 | Hari Prasad |

ಮಂಡ್ಯ: ಜಿಲ್ಲೆಯಲ್ಲಿ ಸೋಮವಾರ 207 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

ಈ ನಡುವೆ 79 ಮಂದಿ ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಮತ್ತು ಜಿಲ್ಲೆಯಲ್ಲಿ ಇಂದು ಕೋವಿಡ್ ಸೋಂಕು ಸಂಬಂಧಿತ ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ.

ಮಂಡ್ಯ 72, ಮದ್ದೂರು 28, ಮಳವಳ್ಳಿ 06, ಪಾಂಡವಪುರ 29, ಶ್ರೀರಂಗಪಟ್ಟಣ 33, ಕೆ.ಆರ್.ಪೇಟೆ 33 ಹಾಗೂ ನಾಗಮಂಗಲದ 06 ಮಂದಿ ಸೇರಿದಂತೆ 207 ಜನರಿಗೆ ಕೋವಿಡ್ ಸೋಂಕು ವಕ್ಕರಿಸಿದೆ.

ಇದರಿಂದ ಜಿಲ್ಲೆಯಲ್ಲಿ 10,531 ಸೋಂಕಿತ ಪ್ರಕರಣಗಳು ದಾಖಲಾಗಿವೆ.

2093 ಮಂದಿಗೆ ಪರೀಕ್ಷೆ:

Advertisement

ಜಿಲ್ಲೆಯಾದ್ಯಂತ ಒಂದೇ ದಿನ 2093 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1016 ರ‍್ಯಾಪಿಡ್ ಹಾಗೂ 1077 ಜನರು ಆರ್‌ಟಿಪಿಸಿಆರ್ ಪರೀಕ್ಷೆಗೊಳಪಟ್ಟಿದ್ದರು.

79 ಮಂದಿ ಬಿಡುಗಡೆ
ಮಂಡ್ಯ 28, ಮದ್ದೂರು 12, ಮಳವಳ್ಳಿ 7, ಪಾಂಡವಪುರ 16, ಶ್ರೀರಂಗಪಟ್ಟಣ 7, ಕೆ.ಆರ್.ಪೇಟೆ 1 ಹಾಗೂ ನಾಗಮಂಗಲದ 8 ಸೇರಿದಂತೆ ಒಟ್ಟು 79 ಮಂದಿ ಸೋಮವಾರ ಗುಣಮುಖರಾಗಿದ್ದಾರೆ. ಇದುವರೆಗೂ 8543 ಮಂದಿ ಬಿಡುಗಡೆಯಾಗಿದ್ದಾರೆ.

1887 ಸಕ್ರಿಯ ಪ್ರಕರಣಗಳು:
ಜಿಲ್ಲೆಯಲ್ಲಿ 1887 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಐಸೋಲೇಷನ್‌ನಲ್ಲಿ 745, ಖಾಸಗಿ ಆಸ್ಪತ್ರೆಗಳ ಐಸೋಲೇನ್‌ನಲ್ಲಿ 143, ಕೋವಿಡ್ ಕೇರ್ ಸೆಂಟರ್‌ನಲ್ಲಿ 175 ಹಾಗೂ ಹೋಂ ಐಸೋಲೇಷನ್‌ನಲ್ಲಿ 816 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next