Advertisement
ರಂಜಾನ್ ಉಪವಾಸ ಅಂತ್ಯಗೊಳಿಸಿದ ನಂತರ ವಿತರಿಸಲಾಗುವ ಆಹಾರದಲ್ಲಿ “ಔಷಧ ಗಂಜಿ’ ಅತಿ ಜನ ಪ್ರಿಯವಾದದ್ದು. ಮರಗೆಣಸು ಅಥವಾ ಹೆಸರು ಕಾಳುಗಳಿಂದ ತಯಾರಿಸುವ ಔಷಧ ಗಂಜಿ ಜತೆಗೆ, ಖರ್ಜೂರ, ಇನ್ನಿತರ ಹಣ್ಣು ಹಂಪಲು ವಿತರಿಸಲಾಗುತ್ತದೆ. ಪ್ರತಿದಿನ 900ರಿಂದ 1,200ದಷ್ಟು ಸಮಾಜದ ನಾನಾ ವರ್ಗಗಳ ಜನರು, ಧರ್ಮ, ಜಾತಿ, ಮತಗಳ ಹಂಗಿಲ್ಲದೆ ಇಲ್ಲಿ ಆಹಾರ ಸೇವಿಸುವುದು ಈ ಮಸೀದಿಯ ಹೆಗ್ಗಳಿಕೆ. ಮುಸ್ಲಿಂ ಮಹಿಳೆಯರಿಗೆ ತಮ್ಮ ಉಪವಾಸ ಅಂತ್ಯಗೊಳಿಸಲು ಪ್ರಾರ್ಥನೆ ಸಲ್ಲಿ ಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿರುವುದು ಇಲ್ಲಿನ ಮತ್ತೂಂದು ವಿಶೇಷ. ಆಹಾರ ತಯಾರಿಕೆಯಿಂದ ವಿತರಣೆವರೆಗೆ ಪರಿಸರ ಸ್ನೇಹಿ ಕ್ರಮಗಳನ್ನು ಅಳವಡಿಸಿಕೊಳ್ಳಲಾಗಿದೆ. ಔಷಧ ಗಂಜಿಯನ್ನು ಪಾರ್ಸೆಲ್ ಪಡೆಯಲು ಬರುವವರೂ ಪ್ಲಾಸ್ಟಿಕ್ ಬ್ಯಾಕ್ ಹೊರತಾಗಿ ಪರಿಸರ ಸ್ನೇಹಿ ಪರಿಕರಗಳನ್ನೇ ತರಬೇಕಿದೆ.
ಮೌಲ್ವಿ ವಿ.ಪಿ. ಸುಹೈಬ್, ಮಸೀದಿ ಆಡಳಿತಾಧಿಕಾರಿ