Advertisement

200 ಮಾನಸ ಯಾತ್ರಿಗಳ ಸ್ಥಳಾಂತರ

06:00 AM Jul 05, 2018 | Team Udayavani |

ಕಾಠ್ಮಂಡು: ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಹಿಂದಿರುಗುತ್ತಿದ್ದ 200 ಭಾರತೀಯ ಯಾತ್ರಾರ್ಥಿಗಳನ್ನು ಬುಧವಾರ ಹಿಲ್ಸಾದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈ ಪೈಕಿ 119 ಜನರನ್ನು ಸಿಮಿಕೋಟ್‌ನಿಂದ ಸುಖೇಟ್‌ಗೆ ಸ್ಥಳಾಂತರಿಸಲಾಗಿದೆ. ನೇಪಾಲಗಂಜ್‌, ಸಿಮಿಕೋಟ್‌ ಹಾಗೂ ಹಿಲ್ಸಾ ಪ್ರಾಂತ್ಯದಲ್ಲಿನ ಪರಿಸ್ಥಿತಿಯನ್ನು ಭಾರತೀಯ ರಾಯಭಾರ ಕಚೇರಿ ಮೇಲ್ವಿಚಾರಣೆ ನಡೆಸುತ್ತಿದ್ದು, ಈ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲ ಭಾರತೀಯ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತರುವ ಪ್ರಯತ್ನ ನಡೆದಿದೆ.

Advertisement

ಈ ಭಾಗದಲ್ಲಿ ಹೆಲಿಕಾಪ್ಟರ್‌ ಮೂಲಕ 200 ಪ್ರಯಾ ಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಅಲ್ಲದೆ ಇನ್ನಷ್ಟು ಚಾರ್ಟರ್‌ ಕಾಪ್ಟರ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಹಾಗೂ ಹೊಸ ಮಾರ್ಗದಲ್ಲಿ ಜನರನ್ನು ಕರೆತರುವ ಬಗ್ಗೆಯೂ ಚಿಂತನೆ ನಡಸುತ್ತಿದೆ. ಹಿಲ್ಸಾ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿ ಮೂಲಸೌಕರ್ಯದ ತೀವ್ರ ಕೊರತೆಯಿದೆ. ಇಲ್ಲಿಂದ ಸುಖೇìಟ್‌ಗೆ ಪ್ರಯಾಣಿಕರನ್ನು ಕಾಪ್ಟರ್‌ ಮೂಲಕ ಕರೆತಂದು, ಅಲ್ಲಿಂದ ಬಸ್‌ನಲ್ಲಿ ನೇಪಾಲ್‌ಗ‌ಂಜ್‌ಗೆ ಕಳುಹಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next