Advertisement

ಮರ ಕಡಿಯಲು ಬಿಡದ ಮಹಿಳೆಯ ಸಜೀವ ದಹನ

09:18 AM Mar 28, 2017 | Team Udayavani |

ಜೋಧ್‌ಪುರ: ರಸ್ತೆ ವಿಸ್ತರಣೆಗಾಗಿ ಮರ ಕಡಿಯಲು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ 20 ವರ್ಷದ ಯುವತಿಗೆ ಬೆಂಕಿ ಹಚ್ಚಿ ಕೊಲ್ಲಲಾಗಿದೆ. ರಾಜಸ್ಥಾ ನದ ಜೋಧ್‌ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಶನಿವಾರ ಈ ಘಟನೆ ನಡೆದಿದೆ. ಜೋಧ್‌ಪುರದಿಂದ 100 ಕಿಮೀ ದೂರದಲ್ಲಿರುವ ಗ್ರಾಮದ ರಸ್ತೆಯೊಂದರ ಅಗಲೀಕರಣಕ್ಕೆ ಮರ ಕಡಿಯಬೇಕಾಗಿತ್ತು. ಆದರೆ ಅದಕ್ಕೆ ತಂಗಿ ಒಪ್ಪಿರಲಿಲ್ಲ. ಹೀಗಾಗಿ ಗ್ರಾಮದ ಕೆಲವರು ತಂಗಿಯನ್ನು ಥಳಿಸಿ, ಪೆಟ್ರೋಲು ಸುರಿದು ಬೆಂಕಿ ಹಚ್ಚಿ ಕೊಂದಿದ್ದಾರೆಂದು ಆಕೆಯ ಸಹೋದರ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next