ಅಕ್ಕಿಯನ್ನು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತಾಲೂಕಿನ ಕೋಗನೊಳ್ಳಿ ಟೋಲ್ ನಾಕಾ ಬಳಿ ನಿಪ್ಪಾಣಿ ಗ್ರಾಮೀಣ
ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.
Advertisement
ಅನ್ನ ಭಾಗ್ಯದ ಅಕ್ಕಿಯನ್ನು ಹಾವೇರಿಯಿಂದ ಮುಂಬೈಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಲಾರಿಯನ್ನು ಪರಿಶೀಲಿಸಿ ಅದರಲ್ಲಿದ್ದ ಸುಮಾರು 4.15 ಲಕ್ಷ ರೂ. ಮೌಲ್ಯದ 437 ಅಕ್ಕಿ ಚೀಲಗಳು ಮತ್ತು 23 ಲಕ್ಷ ರೂ. ಬೆಲೆಯ ಲಾರಿಯನ್ನು ವಶಪಡಿಸಿಕೊಂಡು, ಚಾಲಕ ಆನಂದ ದಾದಾಸಾಹೇಬ (35), ಕ್ಲೀನರ್ ರವೀಂದ್ರ ಸದಾಶಿವ ಕರಜೆ (20) ಹಾಗೂ ಸಮಾಧಾನ ಶಂಕರ ಮೋಟೆ(23) ಎಂಬುವರನ್ನು ಬಂಧಿಸಿದ್ದಾರೆ. ಈ ಮೂವರುಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಗೇರಡಿ ಗ್ರಾಮದವರೆಂದು ತಿಳಿದು ಬಂದಿದೆ. ಈ ಕುರಿತು ನಿಪ್ಪಾಣಿ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.