Advertisement

ಮುಂಬೈಗೆ ಸಾಗಿಸುತ್ತಿದ್ದ 20 ಟನ್‌ ಅನ್ನಭಾಗ್ಯ ಅಕ್ಕಿ ವಶ

03:45 AM Jul 04, 2017 | |

ಚಿಕ್ಕೋಡಿ: ಹಾವೇರಿಯಿಂದ ಮುಂಬೈಗೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 20 ಟನ್‌ ಅನ್ನಭಾಗ್ಯ ಯೋಜನೆ
ಅಕ್ಕಿಯನ್ನು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ತಾಲೂಕಿನ ಕೋಗನೊಳ್ಳಿ ಟೋಲ್‌ ನಾಕಾ ಬಳಿ ನಿಪ್ಪಾಣಿ ಗ್ರಾಮೀಣ
ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ.

Advertisement

ಅನ್ನ ಭಾಗ್ಯದ ಅಕ್ಕಿಯನ್ನು ಹಾವೇರಿಯಿಂದ ಮುಂಬೈಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ಲಾರಿಯನ್ನು ಪರಿಶೀಲಿಸಿ ಅದರಲ್ಲಿದ್ದ ಸುಮಾರು 4.15 ಲಕ್ಷ ರೂ. ಮೌಲ್ಯದ 437 ಅಕ್ಕಿ ಚೀಲಗಳು ಮತ್ತು 23 ಲಕ್ಷ ರೂ. ಬೆಲೆಯ ಲಾರಿಯನ್ನು ವಶಪಡಿಸಿಕೊಂಡು, ಚಾಲಕ ಆನಂದ ದಾದಾಸಾಹೇಬ (35), ಕ್ಲೀನರ್‌ ರವೀಂದ್ರ ಸದಾಶಿವ ಕರಜೆ (20) ಹಾಗೂ ಸಮಾಧಾನ ಶಂಕರ ಮೋಟೆ(23) ಎಂಬುವರನ್ನು ಬಂಧಿಸಿದ್ದಾರೆ. ಈ ಮೂವರು
ಸೊಲ್ಲಾಪುರ ಜಿಲ್ಲೆಯ ಸಾಂಗೋಲಾ ತಾಲೂಕಿನ ಗೇರಡಿ ಗ್ರಾಮದವರೆಂದು ತಿಳಿದು ಬಂದಿದೆ. ಈ ಕುರಿತು ನಿಪ್ಪಾಣಿ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next