Advertisement

Somwarpet ಮರ ಬಿದ್ದು ಕಾರ್ಮಿಕ ಸಾವು

09:47 PM May 05, 2024 | Team Udayavani |

ಸೋಮವಾರಪೇಟೆ: ಟಿಂಬರ್‌ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮರ ಬಿದ್ದು ಕಾರ್ಮಿಕರೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಮೀಪದ ಹಾನಗಲ್ಲು ಗ್ರಾಮದಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.

Advertisement

ತಾಲೂಕಿನ ಯಡವಾರೆ ಗ್ರಾಮದ ನಿವಾಸಿ ಮಿತ್ರೇಶ್‌ (42) ಮೃತಪಟ್ಟವರು.

ಹಾನಗಲ್ಲು ಗ್ರಾಮದಲ್ಲಿ ಚಂಗಪ್ಪ ಅವರಿಗೆ ಸೇರಿದ ತೋಟದಲ್ಲಿದ್ದ ಮರವನ್ನು ಜಮಾಲ್‌ ಮತ್ತು ಕವನ್‌ ಅವರು ಟಿಂಬರ್‌ ಗುತ್ತಿಗೆ ಪಡೆದಿದ್ದು, ಮಿತ್ರೇಶ್‌ ಕೆಲಸಕ್ಕೆ ತೆರಳಿದ್ದರು. ಮರ ಕಡಿಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಮತ್ತೊಂದು ಮರಕ್ಕೆ ಅಪ್ಪಳಿಸಿದ ಪರಿಣಾಮ, ಬುಡ ಸಹಿತ ಉರುಳಿದ ಮರ ಮಿತ್ರೇಶ್‌ ಅವರ ಮೇಲೆ ಬಿದ್ದಿತು. ತೀವ್ರ ಸ್ವರೂಪದ ಗಾಯಗಳಾಗಿ ಮಿತ್ರೇಶ್‌ ಮೃತಪಟ್ಟರು.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next