Advertisement

ಸುಮಾರು 20 ಲಕ್ಷ ಜನರಿಂದ ಪುನೀತ್ ಅಂತಿಮ ದರ್ಶನ: ಆರಗ ಜ್ಞಾನೇಂದ್ರ

03:57 PM Oct 31, 2021 | Team Udayavani |

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯವರೆಗೆ ಶಾಂತಿ ಸುವ್ಯವಸ್ಥೆ ಕಾಪಾಡಿದವರಿಗೆ ಅಭಿನಂದನೆ ತಿಳಿಸುತ್ತೇವೆ. ಸುಮಾರು 20 ಲಕ್ಷ ಜನರು ಪುನೀತ್ ಅಂತಿಮ ದರ್ಶನ ಪಡೆದರು ಎಂದರು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ಶ್ರಮ ಬಹಳವಿದೆ. ಬೆಂಗಳೂರಲ್ಲಿ 20 ಸಾವಿರ ಪೊಲೀಸರು, ಜಿಲ್ಲೆಗಳಿಂದ ಒಂದೂವರೆ ಸಾವಿರ ಪೊಲೀಸರು, ಸೆಂಟ್ರಲ್ ಪೋರ್ಸ್ ಇತ್ತು, 50 ಕೆಎಸ್ ಆರ್ ಪಿ ತುಕಡಿ. ಎಲ್ಲರೂ ನಿದ್ದೆ ಬಿಟ್ಟು ಶ್ರಮಪಟ್ಟಿದ್ದಾರೆ. ಎಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ. ಸಿಎಂ ಬೊಮ್ಮಾಯಿ ಹಾಗೂ ಹಿರಿಯ ಅಧಿಕಾರಿಗಳಿಗೂ ಧನ್ಯವಾದಗಳು ಎಂದರು.

ಇದನ್ನೂ ಓದಿ:ವರ್ಷದ ಹಿಂದೆ ಪುನೀತ್ ಗೆ ರಾಯರ ಸೂಚನೆ?; ವೈರಲ್ ವಿಡಿಯೋ ಗೆ ಮಂತ್ರಾಲಯ ಶ್ರೀಗಳ ಸ್ಪಷ್ಟನೆ

ಪುನೀತ್ ಅಭಿಮಾನಿಗಳು ಶಾಂತಿಯಿಂದ, ಶಿಸ್ತಿನಿಂದ ಸರ್ಕಾರಕ್ಕೆ ಸಹಕಾರ ನೀಡಿದ್ದಾರೆ. ರಾಜ್ ಕುಟುಂಬ ಸರ್ಕಾರಕ್ಕೆ ಸಹಕಾರ ನೀಡಿದ್ದಾರೆ ಮಾಧ್ಯಮಗಳು ಕೂಡ ಉತ್ತಮ ಕೆಲಸ ಮಾಡಿವೆ. ಕೋಟಿಗಟ್ಟಲೆ ಜನ ಟಿವಿ ಮೂಲಕ ವೀಕ್ಷಿಸಿದ್ದಾರೆ. ರಾಜ್ ಕುಟುಂಬ ಧನ್ಯವಾದ ತಿಳಸಿರುವುದು ಅದು ಅವರ ಸೌಜನ್ಯ ಎಂದು ಗೃಹ ಸಚಿವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next