Advertisement

ಮೈಸೂರಿನಲ್ಲಿ 2 ಪ್ರತ್ಯೇಕ ಅವಘಡ: 2 ಬಲಿ;20ಕ್ಕೂ ಹೆಚ್ಚು ಮಂದಿಗೆ ಗಾಯ

12:01 PM Jul 24, 2018 | |

ಮೈಸೂರು : ಟಿ.ನರಸೀಪುರದ ಯಡತೊರೆ ಬಳಿ ಖಾಸಗಿ ಬಸ್ಸೊಂದು ಪಲ್ಟಿಯಾಗಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. 

Advertisement

ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಜಮೀನಿನಲ್ಲಿ ಪಲ್ಟಿಯಾಗಿದೆ. ಹಲವರು ಗಾಯಗೊಂಡಿದ್ದು 20 ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗಾಯಾಳುಗಳೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. 

ಲಾರಿ ಪಲ್ಟಿ; 2 ಬಲಿ 
ಎಚ್‌.ಡಿ.ಕೋಟೆಯ ಚಿಕ್ಕೆರೆಯೂರು  ಎಂಬಲ್ಲಿ  ಬೋರ್‌ವೆಲ್‌ ಯಂತ್ರದ ಸಹಾಯಕ ಲಾರಿ ಪಲ್ಟಿಯಾದ ಪರಿಣಾಮ ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.  

ವಿನೋದ್‌ ಮತ್ತು ಶರವಣ ಎಂಬ ಕಾರ್ಮಿಕರು ಮೃತ ದುರ್ದೈವಿಗಳು. 

Advertisement

ಎಚ್‌.ಡಿ ಕೋಟೆ  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next