Advertisement

ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಿದ್ದು ಇಬ್ಬರು ಮಾತ್ರ!

09:41 PM Aug 10, 2021 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿ, ಹೊರ ರಾಜ್ಯದವರಿಗೂ ಅಲ್ಲಿ ಆಸ್ತಿ ಖರೀದಿಸಲು ಅವಕಾಶ ಮಾಡಿಕೊಟ್ಟ ನಂತರ ಎರಡು ವರ್ಷಗಳಲ್ಲಿ ಹೊರ ರಾಜ್ಯದ ಇಬ್ಬರು ಮಾತ್ರವೇ ಅಲ್ಲಿ ಆಸ್ತಿ ಖರೀದಿಸಿದ್ದಾರೆ.

Advertisement

ಹೀಗೆಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಸಂಸತ್ತಿನಲ್ಲಿ ಲಿಖಿತ ಉತ್ತರ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಕಾನೂನು ಬಾಹಿರ ಚಟುವಟಿಕೆ ಮಾಡವವರ ಜೊತೆ ರಾಜಿಯಿಲ್ಲ: ಸಿಎಂ

ವಿಶೇಷ ಸ್ಥಾನಮಾನ ತೆಗದು ಹಾಕಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರ ರಾಜ್ಯದವರಿಗೂ ಆಸ್ತಿ ಖರೀದಿಗೆ ಅವಕಾಶ ಮಾಡಿಕೊಟ್ಟ ನಂತರ ಅನೇಕರು ಅದರ ಬಗ್ಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಅವರಿಗೆ ಆಸ್ತಿ ಖರೀದಿಯಲ್ಲಿ ಯಾವುದಾದರೂ ಅಡೆ ತಡೆಯಾಗಿದೆಯೇ ಎಂದು ಸಂಸತ್ತಿನಲ್ಲಿ ಪ್ರಶ್ನಿಸಲಾಗಿತ್ತು. ಅದಕ್ಕೆ ಸಚಿವರು ಈ ಉತ್ತರ ನೀಡಿದ್ದು, ಇಬ್ಬರು ಎರಡು ಆಸ್ತಿ ಖರೀದಿಸಿದ್ದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next