Advertisement

ಹುಲಿಗೆ ವಿಷವಿಕ್ಕಿದ್ದ ಇಬ್ಬರು ಪಾಪಿಗಳ ಬಂಧನ

01:22 PM Apr 21, 2021 | Team Udayavani |

ಉದಕಮಂಡಲ: ಹುಲಿಗೆ ವಿಷವಿಕ್ಕಿ ಅದರ ಸಾವಿಗೆ ಕಾರಣರಾಗಿದ್ದ ಇಬ್ಬರು ಆರೋಪಿಗಳನ್ನು ತಮಿಳುನಾಡಿನ ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ವರ್ಷ ನವೆಂಬರ್‍ ನಲ್ಲಿ ನೀಲಗಿರಿ ಜಿಲ್ಲೆಯ ಸಿಂಗಾರ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಮರಣೋತ್ತರ ಪರೀಕ್ಷೆ ಬಳಿಕ ವಿಷ ಸೇವನೆಯಿಂದ ಅದು ಮರಣ ಹೊಂದಿದ್ದು ತಿಳಿದು ಬಂದಿತ್ತು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳ ಕೈಗೆ ಕೋಳ ತೊಡೆಸಿದ್ದು, ಮತ್ತಿಬ್ಬರ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.

ಬಂಧಿತ ಆರೋಪಿಗಳು ಹುಲಿಯ ಚರ್ಮ ಹಾಗೂ ಉಗುರುಗಳನ್ನು ಪಡೆಯುವ ದುರುದ್ದೇಶದಿಂದ ಅವುಗಳಿಗೆ ವಿಷ ಹಾಕಿ ಹತ್ಯೆ ಮಾಡುತ್ತಿದ್ದರು. ಈ ಮೊದಲು ಇವರು ಸಾಕಷ್ಟು ಪ್ರಾಣಿಗಳನ್ನು ಇದೇ ರೀತಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ತನಿಖೆಯಿಂದ ಎಲ್ಲವೂ ಹೊರ ಬರಲಿದೆ. ಬಂಧಿತರನ್ನು ಗುಡಲೂರ್ ಕೋರ್ಟ್ ಗೆ ಹಾಜರು ಪಡಿಸಲಾಗಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next