Advertisement

Bribe Case: 15 ಲಕ್ಷ ಲಂಚ… ಎಸಿಬಿ ಕೈಗೆ ರೆಡ್‌ಹ್ಯಾಂಡ್‌ ಸಿಕ್ಕಿಬಿದ್ದ ಇಡಿ ಅಧಿಕಾರಿಗಳು

05:04 PM Nov 02, 2023 | sudhir |

ರಾಜಸ್ಥಾನ: ರಾಜಸ್ಥಾನದಲ್ಲಿ ಲಂಚ ಪಡೆದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳದಂತೆ ತಡೆಯಲು ವ್ಯಕ್ತಿಯಿಂದ ಇಬ್ಬರು ಅಧಿಕಾರಿಗಳು 15 ಲಕ್ಷ ರೂ. ಹಣ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬಂಧಿತ ಅಧಿಕಾರಿಗಳನ್ನು ನವಲ್ ಕಿಶೋರ್ ಕುಮಾರ್ ಹಾಗೂ ಕಿಶೋರ್ ಮೀನಾ ಎನ್ನಲಾಗಿದೆ.

ಇದನ್ನೂ ಓದಿ: UPSC: ಛಲ ಬಿಡದ ದಿಟ್ಟೆ… 6ನೇ ಯತ್ನದಲ್ಲಿ ಉಡುಪಿಯ ನಿವೇದಿತ ಶೆಟ್ಟಿ ಯುಪಿಎಸ್‌ಸಿ ತೇರ್ಗಡೆ

ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಇಡಿ ಅಕ್ಟೋಬರ್ 30 ರಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಅವರನ್ನು ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ನವೆಂಬರ್ 25 ರಂದು ನಿಗದಿಯಾಗಿದ್ದ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳ ಮೊದಲು ಇಡಿ ಕ್ರಮವನ್ನು ಗೆಹ್ಲೋಟ್ ಸರ್ಕಾರವು ರಾಜಕೀಯ ಸೇಡು ತೀರಿಸಿಕೊಂಡಿದೆ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next