Advertisement

ಶಸ್ತ್ರಾಸ್ತ್ರ, ಸ್ಫೋಟಕ ಹೊಂದಿದ್ದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯ ಇಬ್ಬರು ಆಪ್ತರ ಬಂಧನ

03:46 PM Jun 14, 2021 | Team Udayavani |

ನವದೆಹಲಿ:ಪಶ್ಚಿಮಬಂಗಾಳ ಪೊಲೀಸರು ಸೋಮವಾರ(ಜೂನ್ 14) ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯ ಇಬ್ಬರು ಆಪ್ತ ಸಹಾಯಕರನ್ನು ಪೊಲೀಸರು ಬಂಧಿಸಿದ್ದು, ಎರಡು ದೇಶೀ ನಿರ್ಮಿತ ಬಂದೂಕು, ಸ್ಫೋಟಕ ಹಾಗೂ ಒಂದು ಸ್ವಯಂ ಚಾಲಿತ ಬಂದೂಕನ್ನು ವಶಪಡಿಸಿಕೊಂಡಿರುವ ಘಟನೆ ಹಲ್ಡಿಯಾದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಸುವೇಂದು ಆಪ್ತ ಸಹಾಯಕರನ್ನು ಅಮೀರ್ ಅಲಿಯಾಸ್ ಅರ್ಮಾನ್ ಭೋಲಾ ಮತ್ತು ಅರುಣವ್ ಕುಯ್ಟಿ ಎಂದು ಗುರುತಿಸಲಾಗಿದೆ. ಇಬ್ಬರ ಬಳಿ ಇದ್ದ ಏಳು ಸುತ್ತುಗಳ ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತರಾಗಿದ್ದ ಸುವೇಂದು ಅಧಿಕಾರಿ ಇತ್ತೀಚೆಗೆ ನಡೆದ ಪಶ್ಚಿಮಬಂಗಾಳ ಚುನಾವಣೆಯ ಸಂದರ್ಭದಲ್ಲಿ ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಲ್ಲದೇ ನಂದಿಗ್ರಾಮದಲ್ಲಿ ಸ್ಫರ್ಧಿಸಿದ್ದ ಮಮತಾ ಬ್ಯಾನರ್ಜಿ ಅವರನ್ನು 1,200 ಮತಗಳಿಂದ ಅಧಿಕಾರಿ ಸೋಲಿಸಿದ್ದರು.
Updated…

Advertisement

Udayavani is now on Telegram. Click here to join our channel and stay updated with the latest news.

Next