Advertisement

ಧರ್ಮಸ್ಥಳ ಕಿಂಡಿ ಅಣೆಕಟ್ಟು ತಡೆಗೋಡೆಗೆ 2.60 ಕೋ.ರೂ.: ಅಶ್ವತ್ಥ ನಾರಾಯಣ

12:55 AM Nov 27, 2019 | Team Udayavani |

ಬೆಳ್ತಂಗಡಿ: ನೆರೆಯಿಂದ ಹಾನಿಗೊಳಗಾಗಿರುವ ಧರ್ಮಸ್ಥಳ ಸಮೀಪದ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿಗೆ ಕಾಂಕ್ರೀಟ್‌ ತಡೆಗೋಡೆ ಮತ್ತು ರ್‍ಯಾಂಪ್‌ ನಿರ್ಮಿಸಲು ಟಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 2.60 ಕೋ.ರೂ. ಅಂದಾಜು ಪಟ್ಟಿ ಸಿದ್ಧಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ| ಅಶ್ವತ್ಥ ನಾರಾಯಣ ತಿಳಿಸಿದರು.

Advertisement

ಲಕ್ಷದೀಪೋತ್ಸವ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಆಗಮಿಸಿದ ಅವರು ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆಕಟ್ಟು ವೀಕ್ಷಿಸಿ ಮಾತನಾಡಿದರು. ಚಾರ್ಮಾಡಿ ರಸ್ತೆ ದುರಸ್ತಿ ಮತ್ತು ಬೇಸಗೆಯಲ್ಲಿ ಧರ್ಮಸ್ಥಳ ಸೇರಿದಂತೆ ಈ ಭಾಗದ ಜನತೆಗೆ ನೀರು ಪೂರೈಕೆಗೆ ನೆರಿಯ ಹೊಳೆಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾವಕ್ಕೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ 14 ಕೋಟಿ ರೂ. ಘೋಷಣೆಯಾಗಿತ್ತು. ಸದ್ಯ ಭಕ್ತರಿಗೆ ಯಾವುದೇ ಸಮಸ್ಯೆ ಬಾರದಂತೆ ಯೋಜನೆ ವಿಚಾರವಾಗಿ ಕ್ಯಾಬಿನೆಟ್‌ ಮುಂದಿಟ್ಟು ಅಗತ್ಯ ಕ್ರಮಕ್ಕೆ ಚಿಂತನೆ ನಡೆಸಲಾಗುತ್ತದೆ ಎಂದರು.

ಶಾಸಕರ ಹರೀಶ್‌ ಪೂಂಜ, ಧರ್ಮಸ್ಥಳ ಡಿ. ಸುರೇಂದ್ರ ಕುಮಾರ್‌, ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next