Advertisement

ರಾಜ್ಯದಲ್ಲಿ ಕೋವಿಡ್-19 ಮಹಾಸ್ಪೋಟ: ಒಂದೇ ದಿನ 196 ಹೊಸ ಸೋಂಕು ಪ್ರಕರಣ ದೃಢ

01:59 PM May 23, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಮಹಾಸ್ಪೋಟ ಸಂಭವಿಸಿದೆ. ಶುಕ್ರವಾರ ಸಂಜೆಯ ಬಳಿಕ ಇದುವರೆಗೆ ರಾಜ್ಯದಲ್ಲಿ 196 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ.

Advertisement

ಮಹಾರಾಷ್ಟ್ರದ ನಂಟು ರಾಜ್ಯಕ್ಕೆ ಮತ್ತೆ ಕಂಟಕವಾಗಿ ಕಾಡುತ್ತಿದೆ. ಇಂದು ಕೂಡಾ ದೃಢವಾದ ಸೋಂಕು ಪ್ರಕರಣಗಳ ಪೈಕಿ ಹೆಚ್ಚಿನವರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ರಾಜ್ಯದ ಯಾದಗಿರಿಯಲ್ಲಿ 72 ಸೋಂಕು ಪ್ರಕರಣಗಳು ದೃಢವಾಗಿದೆ. ರಾಯಚೂರಿನಲ್ಲಿ 39 ಸೋಂಕು ಪ್ರಕರಣಗಳು ಖಚಿತವಾಗಿದೆ. ಈ ಎಲ್ಲಾ ಸೋಂಕಿತರು ಮಹಾರಾಷ್ಟ್ರದ ಮುಂಬೈನಿಂದ ಬಂದವರಾಗಿದ್ದಾರೆ. ಮಂಡ್ಯದಲ್ಲಿ 28 ಪ್ರಕರಣಗಳು, ಚಿಕ್ಕಬಳ್ಳಾಪುರದಲ್ಲಿ 20 ಸೋಂಕು ಪ್ರಕರಣಗಳು ದೃಢವಾಗಿದೆ.

ಗದಗದಲ್ಲಿ ಮತ್ತೆ 15 ಸೋಂಕು ಪ್ರಕರಣಗಳು ದೃಢವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮೂರು ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಓರ್ವ ಕಳೆದ ಗುರುವಾರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವಾಗಿದೆ. ಹಾಸನ, ಬೆಂಗಳೂರು ನಗರದಲ್ಲಿ ತಲಾ ನಾಲ್ಕು, ದಾವಣಗೆರೆಯಲ್ಲಿ ಮೂರು, ಕೋಲಾರ, ಉತ್ತರ ಕನ್ನಡದಲ್ಲಿ ತಲಾ ಎರಡು, ಧಾರವಾಡ, ಕೋಲಾರ ಮತ್ತು ಉಡುಪಿಯಲ್ಲಿ ತಲಾ ಒಂದು ಪ್ರಕರಣ ದೃಢವಾಗಿದೆ.

ಇಂದು 15 ಜಿಲ್ಲೆಗಳಲ್ಲಿ 196 ಸೋಂಕು ಪ್ರಕರಣ ದೃಢವಾಗಿದೆ. ಉಡುಪಿ ಜಿಲ್ಲೆಯಲ್ಲಿ ಐದು ಪ್ರಕರಣಗಳು ದೃಢವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಆರೋಗ್ಯ ಇಲಾಖೆಯ ವರದಿಯಲ್ಲಿ ಒಂದೇ ಪ್ರಕರಣದ ಕುರಿತು ವರದಿಯಾಗಿದ್ದು, ಉಳಿದ ನಾಲ್ಕು ಪ್ರಕರಣದ ಕುರಿತು ವರದಿಯಾದಲ್ಲಿ ಇಂದಿನ ಒಟ್ಟು ಸೋಂಕಿತರ ಸಂಖ್ಯೆ 200 ಮುಟ್ಟುತ್ತದೆ.

Advertisement

ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1939ಕ್ಕೆ ಏರಿಕೆಯಾಗಿದೆ. 42 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇಬ್ಬರು ಸೋಂಕಿತರು ಕೋವಿಡ್-19 ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next