Advertisement

ಕೃಷ್ಣಾ ನದಿಗೆ 19 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ

06:38 PM Aug 30, 2022 | Team Udayavani |

ನಾರಾಯಣಪುರ: ಬಸವಸಾಗರ ಜಲಾಶಯದ 492.25 ಮೀ. ಗರಿಷ್ಠ ಎತ್ತರದಲ್ಲಿ 492.11 ಮೀಟರ್‌ಗೆ ನೀರು ತಲುಪಿದೆ. ಜಲಾಶಯದ ಗರಿಷ್ಠ 33.31 ಟಿಎಂಸಿ ಸಂಗ್ರಹ ಮಟ್ಟದಲ್ಲಿ 32.65 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದ್ದರಿಂದ, ಜಲಾಶಯ ಶೇ. 98 ಪ್ರತಿಶತದಷ್ಟು ಭರ್ತಿಯಾಗಿದೆ ಎಂದು ಕೆಬಿಜೆಎನ್‌ಎಲ್‌ ಮೂಲಗಳಿಂದ ತಿಳಿದು ಬಂದಿದೆ.

Advertisement

ಸದ್ಯ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಸಾಗರದಿಂದ ಒಳಹರಿವು 20 ಸಾವಿರ ಕ್ಯೂಸೆಕ್‌ ಇದ್ದು ಜಲಾಶಯದ ಸಂಗ್ರಹ ಮಟ್ಟಕ್ಕೂ ಮೀರಿ ಹೆಚ್ಚುವರಿಯಾಗಿ ಬರುತ್ತಿರುವ ನೀರನ್ನು ನದಿಗೆ ಹರಿಸಲಾಗುತ್ತಿದೆ. ಮಾಹಿತಿಯಂತೆ ಸೋಮವಾರ ಸಂಜೆ ಜಲಾಶಯದ ಎರಡು ಕ್ರಸ್ಟ್‌ಗೇಟ್‌ ಗಳನ್ನು ತೆರದು 13 ಸಾವಿರ ಕ್ಯೂಸೆಕ್‌ ಹಾಗೂ ಎಂಪಿಸಿಎಲ್‌ ಖಾಸಗಿ ಜಲವಿದ್ಯುತ್‌ ಸ್ಥಾವರದಿಂದ 6 ಸಾವಿರ ಕ್ಯೂ. ಸೇರಿ ಒಟ್ಟು 19 ಸಾವಿರ ಕ್ಯೂಸೆಕ್‌ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

ಒಂದೊಮ್ಮೆ ಕೃಷ್ಣಾ ಜಲಾನಯನ ಹಾಗೂ ಬಸವಸಾಗರ ಹಿನ್ನೀರು ವ್ಯಾಪ್ತಿಯಲ್ಲಿ ಮಳೆ ಸುರಿದರೆ ಇಲ್ಲವೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ ಹೊರಹರಿವು ಹೆಚ್ಚಿಸಿದರೆ ಬಸವಸಾಗರದಿಂದ ನದಿಗೆ ನೀರು ಹರಿಸುವ ಪ್ರಮಾಣ ಹೆಚ್ಚಿಸಲಾಗುವುದು. ಒಳಹರಿವು ಕಡಿಮೆಯಾದರೆ ನದಿಗೆ ನೀರು ಹರಿಸುವುದು ಕಡಿಮೆಗೊಳಿಸಲಾಗುವುದು ಎಂದು ಪ್ರಭಾರ ಕಾರ್ಯನಿರ್ವಾಹಕ ಎಂಜನಿಯರ್‌ ಎಂ. ಪ್ರಕಾಶ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next