Advertisement

1859 ಕೋಟಿ ವೆಚ್ಚದಲ್ಲಿ ಜಲಧಾರೆ ಯೋಜನೆ ಸಿದ್ಧ

07:40 PM Sep 19, 2020 | Suhan S |

ವಿಜಯಪುರ: ಜಿಲ್ಲೆಯ 1045 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲಧಾರೆ ವಿಶೇಷ ಯೋಜನಾ ವರದಿ ಸಿದ್ಧಗೊಂಡಿದೆ. 1859.76 ಕೋಟಿ ರೂ. ವೆಚ್ಚದ ಈ ಯೋಜನೆ ಕುರಿತು ಜಿಲ್ಲೆಯ ಎಲ್ಲ ಜನಪ್ರತಿನಿಧಿ ಗಳಿಂದ ಅಭಿಪ್ರಾಯ ಮತ್ತು ಸಲಹೆ ಪಡೆಯಲಾಗುತ್ತಿದೆ ಎಂದು ಜಿಪಂ ಸಿಇಒ ಗೋವಿಂದರೆಡ್ಡಿ ತಿಳಿಸಿದ್ದಾರೆ.

Advertisement

ಶುಕ್ರವಾರ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್‌ ಸಭೆ, ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಜಲಧಾರೆ ಯೋಜನೆ ಅಭಿಪ್ರಾಯ ಸಂಗ್ರಹಣೆಯ ವಿಡಿಯೋ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.

ಸದರಿ ಯೋಜನೆಗೆ ಈಗಾಗಲೇ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಬೇಕಿದೆ. ಇದಕ್ಕೂ ಮುನ್ನ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಸೇರಿದಂತೆ ಇತರೆ ಜನಪ್ರತಿನಿಧಿಗಳ, ಜಿಲ್ಲಾಧಿಕಾರಿಗಳ ಅಭಿಪ್ರಾಯ, ಸಲಹೆ ಸೂಚನೆ ಪಡೆಯಲಾಗುತ್ತಿದೆ. ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ವಿವರಿಸಿದರು.

ಜಲಧಾರೆ ಯೋಜನೆಯಡಿ ವಿವಿಧ ಗ್ರಾಮಗಳು ಹಾಗೂ ನಿಗದಿತ ಪಟ್ಟಣಗಳ ವರೆಗೆ ನೀರು ಲಭ್ಯವಾಗಲಿದೆ. ವಿವಿಧ ಗ್ರಾಮಗಳಿಗೆ ಆಂತರಿಕವಾಗಿ ಮನೆ ಮನೆಗಳಿಗೆ ಜಲ ಜೀವನ ಮಿಷನ್‌ ಅಡಿಯಲ್ಲಿ ನಳಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದರು.

ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಗಳ ಜಲ ಸಂಪನ್ಮೂಲ ಬಳಸಿಕೊಂಡು ಬೇಸಿಗೆಯಲ್ಲಿ ನೀರಿನ ಕೊರತೆ ನೀಗಲು ಈ ಯೋಜನೆ ರೂಪಿಸಲಾಗಿದೆ. ಸದರಿ ಯೋಜನೆ ಅನುಷ್ಠಾನಗೊಂಡಲ್ಲಿ ವಾರದ ಏಳು ದಿನವೂ ದಿನ 24 ಗಂಟೆ ನೀರು ಪೂರೈಕೆ ಆಗಲಿದೆ. ಜಿಲ್ಲೆಯ ಮೂಲ 5 ತಾಲೂಕುಗಳಾದ ಇಂಡಿ, ಸಿಂದಗಿ, ಬಸವನಬಾಗೇವಾಡಿ, ವಿಜಯಪುರ ಹಾಗೂ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯ 1045 ಗ್ರಾಮ, 11 ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಪಟ್ಟಣಗಳಿಗೆ ಕುಡಿಯಲು ಸಮರ್ಪಕ ನೀರು ದೊರೆಯಲಿದೆ ಎಂದರು.

Advertisement

ಸದರಿ ಯೋಜನೆಯಲ್ಲಿ 2052ನೇ ಇಸ್ವಿಯ ಹಂತದಲ್ಲಿನ ಜನಸಂಖ್ಯೆ ಆಧಾರದ ದೂರಗಾಮಿ ಚಿಂತನೆಯಿಂದ ಯೋಜನೆ ರೂಪಿಸಲಾಗಿದೆ. 2011ರ ಜನಗಣತಿ ಅನ್ವಯ 2022ರ ಅವಧಿ ಗೆ 17.77 ಲಕ್ಷ, 2037ರ ಅವ ಧಿಗೆ 20.59 ಲಕ್ಷ ಹಾಗೂ 2052ರ ಅವಧಿಗೆ 23.42 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸುವ ಯೋಜನಾ ವರದಿಯನ್ನು ಸ್ತುಪ್‌ ಕನ್ಸಲ್ಟಂಟ್‌ ವತಿಯಿಂದ ಸಿದ್ಧಪಡಿಸಲಾಗಿದೆ. 2022ನೇ ವರ್ಷದಲ್ಲಿ 1.58 ಟಿಎಂಸಿ, 2037 ನೇ ವರ್ಷದಲ್ಲಿ 1.83 ಟಿಎಂಸಿ ಹಾಗೂ 2052ನೇ ವರ್ಷದಲ್ಲಿ 2.08 ಟಿಎಂಸಿ ಅಡಿ ನೀರಿನ ಅಗತ್ಯ ಬೀಳಲಿದೆ ಎಂದು ಯೋಜನೆಯಲ್ಲಿ ಅಳವಡಿಸಲಾಗಿದೆ. ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಪೈಪ್‌ಲೈನ್‌ ಮೂಲಕ ಮೇಲ್‌ ಜಲ ಸಂಗ್ರಹಗಾರಗಳಿಗೆ (ಒಎಚ್‌ಟಿ) ನೀರು ಪೂರೈಸುವ ಮತ್ತು ನೀರಿನ ಮಿತವ್ಯಯ ಹಾಗೂ ನಿರ್ವಹಣೆಗಾಗಿ ಸ್ಕಾಡಾ ತಾಂತ್ರಿಕತೆ ಅಳವಡಿಸಲಾಗುತ್ತದೆ. ಸ್ತುಪ್‌ ಕನ್ಸಲ್ಟಂಟ್‌ ಸಂಸ್ಥೆ ಯೋಜನೆ ಸಿದ್ಧಪಡಿಸಿದೆ ಎಂದು ಯೋಜನೆ ಅಧಿಕಾರಿಗಳು ವಿವರಿಸಿದರು.

ಈ ಸಂದರ್ಭದಲ್ಲಿ ಶಾಸಕ ಅರುಣ ಶಹಾಪುರ ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ವಲಸಿಗ ಸಮುದಾಯ ಬಿಟ್ಟು ಹೋಗದಂತೆ ನೋಡಿಕೊಳ್ಳಲು, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರು ಅಧಿಕೃಕೃತ ಜನಸಂಖ್ಯೆ ಅಂಕಿಅಂಶ ಸಂಗ್ರಹಣೆಗೆ, ಗ್ರಾÂವಿಟಿ ಮೂಲಕ ನೀರು ಪೂರೈಕೆಯ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸುವಂತೆ ಸಲಹೆ ನೀಡಿದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಯೋಜನೆ ಸಾಧಕ-ಬಾಧಕ ಕುರಿತು ಅಭಿಪ್ರಾಯ ಪಡೆಯಬೇಕು. ಯೋಜನೆ ಜಾರಿಗಾಗಿ ರೈತರ ಸಹಕಾರ, ಭೂಸ್ವಾ ಧೀನ ಪರಿಹಾರ, ಪೈಪ್‌ ಲೈನ್‌ ಅಳವಡಿಕೆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಪೂರ್ವಭಾವಿ ಪರಿಶೀಲನೆ ನಡೆಸುವಂತೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next