Advertisement

ಹುಚ್ಚುನಾಯಿ ಕಡಿದು 15 ಮಂದಿ ಗಾಯ

06:07 AM Jan 05, 2019 | Team Udayavani |

ಮೈಸೂರು: ಹುಚ್ಚುನಾಯಿಯೊಂದು 15 ಹೆಚ್ಚಿನ ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ  ಮೂಡಲಹುಂಡಿ, ವರಕೋಡು ಮತ್ತು ಪಿಲ್ಲಳ್ಳಿಯಲ್ಲಿ ಸಂಭವಿಸಿದೆ.

Advertisement

ಮೂಡಲಹುಂಡಿಯ ಮಾಕೇಗೌಡ (55), ಪುಟ್ಟೇಗೌಡ (50), ಮಕ್ಕಳಾದ ಸಂಪತ್‌ಕುಮಾರ್‌, ಪ್ರೀತಿ, ಕಿರಣ್‌, ವರಕೋಡು ಗ್ರಾಮದ ಪ್ರೀತಮ್‌, ಯಶೋಧ ಸೇರಿದಂತೆ 15 ಹೆಚ್ಚಿನ ಮಂದಿ ಗಾಯಗೊಂಡಿದ್ದು, ಇವರೆಲ್ಲರೂ ಮೈಸೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹಾಗೂ ಕೆ.ಆರ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಗುರುವಾರ ಸಂಜೆ ಪಿಲ್ಲಳ್ಳಿಯಲ್ಲಿ ಕಾಣಿಸಿಕೊಂಡ ಹುಚ್ಚುನಾಯಿ 5- 6 ಜನರ ಮೇಲೆ ದಾಳಿ ನಡೆಸಿದ್ದು, ಗ್ರಾಮಸ್ಥರು ನಾಯಿಯನ್ನು ಅಲ್ಲಿಂದ ಓಡಿಸಿದ್ದಾರೆ. ಪಕ್ಕದ ವರಕೋಡು ಗ್ರಾಮಕ್ಕೆ ಬಂದ ನಾಯಿ ಅಲ್ಲಿಯೂ 5-6 ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಬಳಿಕ ಮೂಡಲಹುಂಡಿ ಗ್ರಾಮಕ್ಕೆ ಬಂದ ನಾಯಿ, ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ 6-7 ಜನರ ಮೇಲೆ ದಾಳಿ ನಡೆಸಿದೆ. ಗ್ರಾಮಸ್ಥರ  ಮೇಲೆ ದಾಳಿ ನಡೆಸಿದ ಹುಚ್ಚುನಾಯಿ ಪರಾರಿಯಾಗಿದ್ದು, ಮತ್ತೆ ಬರಬಹುದೆಂಬ ಆತಂಕದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next