Advertisement

CM Siddaramaiahಗೆ 14 ಮುಡಾ ಸೈಟ್‌: ಆರ್‌. ಅಶೋಕ್‌ “ದಾಖಲೆ’

12:02 AM Aug 08, 2024 | Team Udayavani |

ಮಂಡ್ಯ: ಮೈಸೂರಿನ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿ 14 ನಿವೇಶನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್‌. ಅಶೋಕ್‌ ದಾಖಲೆಗಳನ್ನು ಬಿಡುಗಡೆ ಮಾಡಿದರು.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸತ್ಯವನ್ನು ಮುಚ್ಚಿಡಲು ಹಾಗೂ ಮರೆಮಾಚಲು ಸಾಧ್ಯವಿಲ್ಲ. ಈ ಜಮೀನನ್ನು ದಲಿತ ಸಮುದಾಯದ ನಿಂಗ ಎಂಬವರು 1936ರಲ್ಲಿ 1 ರೂಪಾಯಿಗೆ ತೆಗೆದು ಕೊಂಡಿದ್ದರು. ಇವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಎಂಬ ಮೂವರು ಮಕ್ಕಳಿದ್ದಾರೆ.

ಇದಾದ ಅನಂತರ ನಿಂಗ ಸಾವ ನ್ನಪ್ಪಿದ್ದರು. ನಿಂಗ ಅವರ ಹೆಂಡತಿ ನಿಂಗಮ್ಮ 1990ರಲ್ಲಿ ನಿಧನರಾದರು. ಆಗ ಮಲ್ಲಯ್ಯ ಹಾಗೂ ದೇವರಾಜು ಮೈಲಾರಯ್ಯನಿಗೆ ಕೆಸರೆ ಗ್ರಾಮದ ಸರ್ವೇ ನಂ. 462ರಲ್ಲಿ 4.37 ಎಕರೆ ಹಾಗೂ 464ರಲ್ಲಿ 3.16 ಎಕರೆ ಜಮೀನನ್ನು ರಿಜಿಸ್ಟರ್‌ ಡಾಕ್ಯುಮೆಂಟ್‌ ಮೂಲಕ 300 ರೂ.ಗೆ ವರ್ಗಾಯಿಸಿದ್ದಾರೆ. ಇದರಿಂದ ದೇವರಾಜನಿಗೆ ಮಾಲಕತ್ವ ಇರುವುದೇ ಇಲ್ಲ. ನಿಂಗ ಕುಟುಂಬಸ್ಥರ ವಂಶ ವೃಕ್ಷದಲ್ಲಿ 27 ಜನರು ಇದ್ದಾರೆ.

ಮೈಲಾರಯ್ಯನಿಗೆ ಹಕ್ಕು ಬದ ಲಾವಣೆ ಆಗಿರುತ್ತದೆ. ಆದರೆ ಕಂದಾಯ ಇಲಾಖೆಯ ಆರ್‌ಟಿಸಿ ಯಲ್ಲಿ ಇವರ ಹೆಸರನ್ನು ಸೇರಿಸದೇ ಅ ಧಿಕಾರಿಗಳು ನಿರ್ಲಕ್ಷ್ಯ ಹಾಗೂ ಲೋಪ ಎಸಗಿದ್ದಾರೆ. ಇದರಿಂದ ನಿಂಗ ಬಿನ್‌ ಜವರ ಅವರ ಹೆಸರಿನಲ್ಲಿಯೇ ಮುಂದುವರಿಯುತ್ತದೆ. ಮೈಲಾ ರಯ್ಯ ಸಾವನ್ನಪ್ಪಿದ ಬಳಿಕ ಆತನ ಮಗ ಮಂಜುನಾಥಸ್ವಾಮಿಗೆ ಬರ ಬೇಕು. ಆದರೆ ಬಂದಿಲ್ಲ. ಇದರ ನಡುವೆ ದೇವರಾಜನಿಗೆ ತನ್ನ ತಂದೆ ನಿಂಗ ಹೆಸರಿನಲ್ಲಿಯೇ ಮುಂದುವರಿದಿರುವುದು ಗೊತ್ತಾಗಿತ್ತು.

ಆಗ ಆತ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ ಸಹೋದರನಿಗೆ ವಂಚಿಸಿ ಪೌತಿ ಖಾತೆ ಮಾಡಿಸಿ ಆರ್‌ಟಿಸಿಯಲ್ಲಿ ತನ್ನ ಹೆಸರನ್ನು ಸೇರಿಸಿಕೊಂಡಿದ್ದ. ಇದಾವುದನ್ನೂ ಪರಿಶೀಲಿಸದ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರ ಅಣ್ಣ ಮಲ್ಲಿಕಾರ್ಜುನಸ್ವಾಮಿ ದೇವರಾಜು ಎಂಬವನಿಂದ ಮಾತ್ರ ಸಹಿ ಹಾಕಿಸಿ ಕೊಂಡಿದ್ದಾರೆ. ದೇವರಾಜು ಸರಕಾರಿ ಸೇವೆಯಲ್ಲಿದ್ದರೂ ರೈತ ಎಂದು ಹೇಳಿಕೊಂಡಿದ್ದ ಎಂದು ದೂರಿದರು.

Advertisement

2001ರಲ್ಲಿ ಮುಡಾವು ಎಲ್‌ ಆ್ಯಂಡ್‌ ಟಿ ಅವರಿಗೆ 11,58,6632 ರೂ.ಗೆ ಬಡಾವಣೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿ, ಅಭಿವೃದ್ಧಿಪಡಿಸಲಾಗಿತ್ತು. 2004ರಲ್ಲಿ 3.15 ಗುಂಟೆಯನ್ನು ಸಿದ್ದ ರಾಮಯ್ಯ ಅವರ ಪತ್ನಿಯ ಅಣ್ಣ ಮಲ್ಲಿಕಾರ್ಜುನಸ್ವಾಮಿ ಅಕ್ರಮವಾಗಿ ಕ್ರಯ ಮಾಡಿಕೊಂಡಿದ್ದರು. 27 ಮಂದಿ ಹಕ್ಕುದಾರರಿದ್ದರೂ ಅಕ್ರಮವಾಗಿ ಮಾಡಿಕೊಂಡಿದ್ದಾರೆ.

1998ರಲ್ಲಿ ಸ್ವಾಧೀನವಾದ ಜಮೀನನ್ನು 2004ರಲ್ಲಿ ಕ್ರಯಕ್ಕೆ ಹೇಗೆ ಮಾಡಿಕೊಂಡರು ಎಂದು ಪ್ರಶ್ನಿಸಿದ ಅವರು, ಮತ್ತೆ 2005ರಲ್ಲಿ ವ್ಯವಸಾಯ ಭೂಮಿಯಿಂದ ನಿವೇಶನದ ಭೂಮಿಯಾಗಿ ಪರಿವರ್ತನೆ ಮಾಡಿದ್ದಾರೆ. 2001ರಲ್ಲೇ ಬಡಾವಣೆ ಕೆಲಸ ನಡೆಯುತ್ತಿತ್ತು. ಆದರೆ 2005ರಲ್ಲಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಡಿಸಿ, ತಹಶೀಲ್ದಾರ್‌ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ವರದಿ ನೀಡಿದ್ದಾರೆ.

2005ರಲ್ಲಿ ಮುಡಾ ಆಯುಕ್ತರು ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಆಗಿನ ಜಿಲ್ಲಾ ಧಿಕಾರಿ ಇದ್ಯಾವುದೂ ನೋಡದೆ ಕುರುಡರಂತೆ ಭೂ ಪರಿವರ್ತನೆ ಮಾಡಿಕೊಟ್ಟಿದ್ದಾರೆ. ಅಲ್ಲದೆ 2005ರಲ್ಲಿ ಸಿದ್ದರಾಮಯ್ಯ ಪತ್ನಿಯ ಅಣ್ಣ ಕ್ರಯಕ್ಕೆ ತೆಗೆದುಕೊಳ್ಳುವ ಮುನ್ನವೇ ಮುಡಾ 12 ಸೈಟ್‌ಗಳನ್ನು ಅಲಾಟ್‌ ಮಾಡಲಾಗಿತ್ತು. 12 ಸೈಟುಗಳನ್ನು ಅಲಾಟ್‌ ಮಾಡಿದ್ದ ಜಮೀನನ್ನು ಹೇಗೆ ಕ್ರಯ ಮಾಡಿಸಿಕೊಳ್ಳಲು ಸಾಧ್ಯ? ಎಂದವರು ಪ್ರಶ್ನಿಸಿದರು.

2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಶಿನ ಕುಂಕುಮಕ್ಕೆ 3.16 ಎಕರೆ ಜಮೀನು ನೀಡಿದ್ದರು. 2014ರಲ್ಲಿ ಪಾರ್ವತಿ ಅವರು ಮುಡಾಗೆ ಪತ್ರ ಬರೆದು ನನಗೆ ಬಂದ ಜಮೀನಿನಲ್ಲಿ ಬಡಾವಣೆ ಮಾಡಿದ್ದೀರಾ. ಬದಲಿ ಜಾಗವನ್ನು ನೀಡಿ ಎಂದಿದ್ದರು. ಆಗ ಮುಡಾ ಅ ಧಿಕಾರಿ ಪತ್ರ ಪರಿಶೀಲಿಸಿ ಇದರ ಬಗ್ಗೆ ಚರ್ಚಿಸಿ ಪರಿಗಣಿಸಲಾಗುವುದು ಎಂದು ಮರು ಉತ್ತರ ನೀಡಿದ್ದಾರೆ. 2023ರಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಾನೂನು ಬಾಹಿರವಾಗಿ ನಿವೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡಿದರು.

ಈ ಎಲ್ಲ ಪ್ರಕ್ರಿಯೆಗಳನ್ನು ಗಮನಿ ಸಿದರೆ ಇದರಲ್ಲಿ ನಿಮ್ಮ ಕೈವಾಡ ಇರುವುದು ಗೊತ್ತಾಗುತ್ತದೆ. ಕೂಡಲೇ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ನೀವು ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

ಡಿಸಿಎಂ ಆಗಿದ್ದಾಗ 3.27 ಲಕ್ಷ ಪರಿಹಾರ ವಿತರಣೆ
ಒಬ್ಬರಿಂದ ಮಾತ್ರ ಸಹಿ ಹಾಕಿಸಿಕೊಂಡು ರಿಜಿಸ್ಟರ್‌ ಮಾಡಿರುವುದು ನಿಯಮ ಬಾಹಿರ. 1998ರಲ್ಲಿ ಮುಡಾ 3.16 ಎಕರೆ ಜತೆಗೆ ಅಂದು ದೇವನೂರು 3ನೇ ಹಂತದ ಬಡಾವಣೆಗೆ 462 ಎಕರೆ ಜಮೀನು ನಿಗದಿ ಮಾಡಲಾಗಿತ್ತು. ಆಗ ದೇವರಾಜು ಎಂಬಾತ ತನ್ನ ಕುಟುಂಬಸ್ಥರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ. ಆಗಿನ ದರದಂತೆ 3.27 ಲಕ್ಷ ರೂ. ಪರಿಹಾರವನ್ನು ದೇವರಾಜು ಪಡೆದಿದ್ದ. ಆಗ ಇದೇ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು ಎಂದು ಅಶೋಕ್‌ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next