Advertisement

Wild Elephant: ಕಾಫಿನಾಡಲ್ಲಿ ಜಲಕ್ರೀಡೆಯಲ್ಲಿ ತೊಡಗಿರುವ 12 ಕಾಡಾನೆಗಳ ಹಿಂಡು

02:38 PM Dec 11, 2023 | Team Udayavani |

ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕಿನ ಕುಸುಬೂರು ಗ್ರಾಮದ ಕೆರೆಯೊಂದರಲ್ಲಿ 12 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದ ದೃಶ್ಯ ಕಂಡು ಬಂತು.

Advertisement

ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಭೀತಿ ಹೆಚ್ಚಾಗುತ್ತಿದ್ದು, ಕುಸುಬೂರು, ಮುತ್ತಿನಕೊಪ್ಪ, ಸಾತ್ಕೋಳ, ಮುಂಡುಗೋಡು ಸೇರಿದಂತೆ ಹತ್ತಾರು ಹಳ್ಳಿಯ ಜನರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಕುಸುಬೂರು ಗ್ರಾಮದ ಕೆರೆಯೊಂದರಲ್ಲಿ ಕಾಡಾನೆಗಳ ಹಿಂಡು ಮರಿಗಳ ಜೊತೆ ಕೆರೆ ನೀರಲ್ಲಿ ಈಜಾಡುತ್ತಾ, ಕಾಲ ಕಳೆಯುತ್ತಿರುವುದು ಕಂಡು ಬಂತು.

ಅರಣ್ಯ ಪ್ರದೇಶದಿಂದ ಕಾಡಂಚಿನ ಗ್ರಾಮಗಳಿಗೆ ಆಗಮಿಸುತ್ತಿರುವ ಕಾಡಾನೆಗಳ ಹಿಂಡನ್ನು ಗ್ರಾಮದ ಕೆರೆಯಲ್ಲಿ ಕಂಡು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಕೊಪ್ಪ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next