Advertisement

ಮತದಾರರ ಪಟ್ಟಿ ಪರಿಷ್ಕರಣೆಗೆ 12 ವೀಕ್ಷಕರು

06:35 AM Jan 25, 2018 | |

ಬೆಂಗಳೂರು: ಮತದಾರ ಪಟ್ಟಿ ಪರಿಷ್ಕರಣೆ ಅಭಿಯಾನ ನಡೆಸುತ್ತಿರುವ ಚುನಾವಣಾ ಆಯೋಗ 12 ಮಂದಿ ಹಿರಿಯ ಐಎಎಸ್‌ ಅಧಿಕಾರಿಗಳನ್ನು “ಮತದಾರ ಪಟ್ಟಿಯ ವೀಕ್ಷಕ’ ರನ್ನಾಗಿ ನೇಮಕ ಮಾಡಿ ವಿವಿಧ ಜಿಲ್ಲೆಗಳ ಹೊಣೆಗಾರಿಕೆ ನೀಡಿದೆ. ಎಂ. ಮಹೇಶ್ವರ್‌ರಾವ್‌- ಉಡುಪಿ, ಶಿವಮೊಗ್ಗ. ಟಿ.ಕೆ. ಅನಿಲ್‌ಕುಮಾರ್‌ -ರಾಮನಗರ, ತುಮಕೂರು. ಮನೀಶ್‌ ಮೌದ್ಗಿಲ್‌- ಉತ್ತರ ಕನ್ನಡ, ಬೆಳಗಾವಿ. ಜಿ. ಕುಮಾರ್‌ ನಾಯ್ಕ- ರಾಯಚೂರು, ಬಳ್ಳಾರಿ, ಗದಗ. ಹರ್ಷ ಗುಪ್ತಾ- ಬೀದರ್‌, ಕಲಬುರಗಿ, ಯಾದಗಿರಿ, ಕೊಪ್ಪಳ. ಪಿ. ಮಣಿವಣ್ಣನ್‌-ವಿಜಯಪುರ, ಬಾಗಲಕೋಟೆ. ರಾಜೇಂದ್ರ ಕುಮಾರ್‌ ಕಠಾರಿಯಾ- ಬೆಂಗಳೂರು ನಗರ, ಬಿಬಿಎಂಪಿ.

Advertisement

ಪಂಕಜ್‌ಕುಮಾರ್‌ ಪಾಂಡೆ-ಚಿತ್ರದುರ್ಗ, ದಾವಣಗೆರೆ. ನವೀನ್‌ರಾಜ್‌ ಸಿಂಗ್‌- ಬೆಂಗಳೂರು ಗ್ರಾಮಾಂತರ,
ಚಿಕ್ಕಬಳ್ಳಾಪುರ, ಕೋಲಾರ. ಪಿ. ಹೇಮಲತಾ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ. ಶಿವಯೋಗಿ ಸಿ. ಕಳಸದ- ಧಾರವಾಡ, ಹಾವೇರಿ. ಡಾ. ಪಿ.ಸಿ. ಜಾಫ‌ರ್‌-ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಜವಾಬ್ದಾರಿ ನೀಡಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next