Advertisement

12 ಗೋಶಾಲೆಗಳಿಗೆ 24 ಲ.ರೂ. ನೆರವು ಮಂಜೂರು

01:24 AM May 07, 2020 | Sriram |

ಉಡುಪಿ/ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ವಿವಿಧ ಗೋಶಾಲೆಗಳಿಗೆ ರಾಜ್ಯ ಧಾರ್ಮಿಕ ಪರಿಷತ್‌ನ ಸಾಮಾನ್ಯ ಸಂಗ್ರಹಣ ನಿಧಿಯಿಂದ ಒಟ್ಟು 24 ಲ.ರೂ. ನೆರವನ್ನು ಧಾರ್ಮಿಕ ದತ್ತಿ ಸಚಿವ ಮತ್ತು ಪರಿಷತ್‌ ಅಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಮಂಜೂರು ಮಾಡಿದ್ದಾರೆ. ಲಾಕ್‌ಡೌನ್‌ ಕಾರಣದಿಂದ ಗೋಶಾಲೆಗಳ ಮೇವು ಮತ್ತು ಇತರ ಖರ್ಚಿಗಾಗಿ ಈ ಸಹಾಯಧನವನ್ನು ಮಂಜೂರುಗೊಳಿಸಲಾಗಿದೆ.

Advertisement

ಬಂಟ್ವಾಳ ಪಜೀರು ಬೀಜಗುರಿಯ ಗೋ ವನಿತಾ ಶ್ರಯ ಗೋಶಾಲೆಗೆ 5 ಲ.ರೂ., ನೀಲಾವರ ಗೋಶಾಲೆಗೆ 3 ಲ.ರೂ., ತೆಕ್ಕಟ್ಟೆ ಸಮೀಪದ ಹೂವಿನಕೆರೆ ಗೋಶಾಲೆ, ಬಂಟ್ವಾಳ ಕನ್ಯಾನ ಭಾರತ ಸೇವಾಶ್ರಮದ ಗೋಶಾಲೆ, ಕೊಕ್ಕಡ ಹಳ್ಳಿಂಗೇರಿ ಗೋಶಾಲೆ, ಕಟೀಲು ದೇವಸ್ಥಾನದ ಗೋಶಾಲೆ, ಒಡಿಯೂರು ಗೋಶಾಲೆ, ಮಡ್ಯಾರ್‌ ಕೋಟೆಕಾರ್‌ನ ಗೋಶಾಲೆ, ಕಲ್ಲಡ್ಕದ ಶ್ರೀ ರಾಮ ಗೋಶಾಲೆಗೆ ತಲಾ 2 ಲ.ರೂ., ಬೆಳ್ತಂಗಡಿ ಗಂಡಿಬಾಗಿಲಿನ ಸಿಯೋನ್‌ ಆಶ್ರಮದ ಗೋಶಾಲೆ, ಸೌತಡ್ಕ ಗೋಶಾಲೆಗೆ ತಲಾ 1 ಲ.ರೂ. ಮೊತ್ತವನ್ನು ಮಂಜೂರು ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next